ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ

ಶಿಗ್ಗಾವಿ :

     ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ದಿಗೆ ಪೂರಕವಾಗಿ ಮಕ್ಕಳಲ್ಲಿಯ ಗುಪ್ತಪ್ರತಿಭೆಯನ್ನು ಹೊರತರುವ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇಧಿಕೆಯಾಗಿ ಪ್ರತಿಭಾ ಕಾರಂಜಿ ಕಾರ್ಯನಿರ್ವಹಿಸುತ್ತದೆ ಎಂದು ಶಿಗ್ಗಾವಿ ತಾಲೂಕಾ ಶಿಕ್ಷಣ ಸಮೀತಿಯ ಗೌರವ ಕಾರ್ಯದರ್ಶಿಗಳಾದ ಶಂಕರಗೌಡ್ರ ಪಾಟೀಲ ಹೇಳಿದರು.

     ಪಟ್ಟಣದ ಎಸ್‍ಬಿಬಿಎಮ್‍ಡಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲಾ ಪಂಚಾಯತ ಹಾವೇರಿ, ತಾಲೂಕಾ ಪಂಚಾಯತ ಶಿಗ್ಗಾವಿ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಿಗ್ಗಾವಿ ವತಿಯಿಂದ 2018-19 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕತಿಕ, ಶೈಕ್ಷಣಿಕ ಸ್ಪರ್ದೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೂ ಸಹಿತ ಅವಕಶ ನೀಡುವ ವೇಧಿಕೆಯಾಗಿದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ರೂಪಿಸಲು ಪೋಷಕರು ಹಾಗೂ ಶಿಕ್ಷಕರನ್ನು ಪ್ರೋತ್ಸಾಹಿಸುವ ವೇಧಿಕೆಯಾಗಿ ಪ್ರತಿಭಾ ಕಾರಂಜಿ ಕಾರ್ಯನಿರ್ವಹಿಸುತ್ತಿದೆ ಎಂದರು.

      ತಾಪಂ ಸದಸ್ಯ ಶ್ರೀಕಾಂತ ಪೂಜಾರ ಮಾತನಾಡಿ, ದಿನದಿಂದ ದಿನಕ್ಕೆ ಸರಕಾರ ವಿವಿಧ ಕಾರ್ಯಕ್ರಮಗಳನ್ನು ಬದಲಾವಣೆ ಮಾಡುತ್ತ ಬರುತ್ತಿದ್ದು ಪಠ್ಯೇತ್ತರ ಚಟುವಟಿಕೆಯ ಜೊತೆಗೆ ಆಟದ ಮೂಲಕ ಪ್ರತಿಭೆಯನ್ನು ಗುರುತಿಸುವ ಮಟ್ಟಕ್ಕೆ ಮಕ್ಕಳ ಜ್ಞಾನವನ್ನು ವೃದ್ದಿಸಲು ಸರಕಾರ ಈ ಕ್ರಮ ತೆಗೆದುಕೊಂಡಿದೆ ಇದು ಯಶಸ್ವಿ ವಿದ್ಯಾರ್ಥಿಗಳಿಗೆ ಸದುಪಯೋಗವಾಗಬಲ್ಲದು, ಪ್ರತಿ ವಿದ್ಯಾರ್ಥಿಯೂ ಸಹಿತ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಪ್ರತಿಭಾನ್ವಿತರಾಗಲು ಮುಂದೆ ಬರಬೇಕಷ್ಟೇ ಎಂದರು.

     ತಾ ಪಂ ಅದ್ಯಕ್ಷೆ ಪಾರವ್ವ ಆರೇರ ಭಾಗವಹಿಸಿ ಮಕ್ಕಳಿಗೆ ಶುಭಾಶಯ ಕೋರಿದರು, ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿ ಕಾರ್ಯಕ್ರಮಗಳು ಮೂಡಿಬಂದವು, ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೆಳವರ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಮಂಜುಳಾ ಚಂದ್ರಗಿರಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಬಿ ಶ್ರೀನಿವಾಸ, ಜಿ ಎನ್ ಯಲಿಗಾರ, ಐ ಆರ್ ಬಳ್ಳಾರಿ, ಎಸ್ ಎನ್ ಮುಗಳಿ, ಬಿ ಎಸ್ ಪಟ್ಟಣಶೆಟ್ಟಿ, ಬಿ ಡಿ ಮಾಳಗಿ, ಶ್ರೀಮತಿ ವಿನೋದಾ ಪಾಟೀಲ, ಎಸ್ ವಾಯ್ ಕಬನೂರ, ಎಚ್ ಡಿ ಕುಂಕೂರ, ನಿಂಗಪ್ಪ ಕಮಡೊಳ್ಳಿ, ಟಿ ಕೆ ಭರಮಗೌಡ್ರ, ಸೇರಿದಂತೆ ವಿವಿಧ ಶೈಕ್ಷಣಿಕ ಸಂಘಗಳ ಅದ್ಯಕ್ಷರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

       ನಿರ್ಣಾಯಕರಾಗಿ ಕಲಾವಿಧರಾದ ಬಸವರಾಜ ಗೊಬ್ಬಿ, ಕೃಷ್ಣ ಆಲದಕಟ್ಟಿ ಹಾಗೂ ಸಂಗಡಿಗರಾಗಿ ಕಾರ್ಯನಿರ್ವಹಿಸಿದರು, ಕಾರ್ಯಕ್ರಮವನ್ನು ನಾಗಪ್ಪ ಬೆಂತೂರ ಮತ್ತು ಆರ್ ಆರ್ ರಟ್ಟಿಹಳ್ಳಿ ನಿರ್ವಹಿಸಿದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link