ಕುಣಿಗಲ್
ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗಲು ಕುಣಿಗಲ್ ತಾಲ್ಲೂಕಿನಾದ್ಯಂತ ನಾಗರೀಕರು ಸ್ಪಂದಿಸುವ ಮೂಲಕ ತಮ್ಮ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಕುಣಿಗಲ್ ನಾಗರೀಕ ಸಮಾಜ, ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಲಯನ್ಸ್ ವಿದ್ಯಾಸಂಸ್ಥೆ, ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘ, ಪ್ರಥಮ ದರ್ಜೆ ಕಾಲೇಜು, ಜ್ಞಾನಭಾರತಿ ವಿದ್ಯಾಸಂಸ್ಥೆ ಹಾಗೂ ಜಿ.ಪರಮೇಶ್ವರ್ ಯುವ ಸೈನ್ಯ ವೇದಿಕೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ನಾಗರೀಕರು, ವಿದ್ಯಾರ್ಥಿಗಳು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.
ಹಣಕಾಸು ಸೇರಿದಂತೆ ದವಸ ದಾನ್ಯ ಎಣ್ಣೆ ಕಾಳು ಬಿಸ್ಕೆಟ್ ತರಕಾರಿ ಉಡುಗೆ ತೊಡುಗೆಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ದಾನ ಮಾಡುವ ಮೂಲಕ ಕೊಡಗಿನ ಜನರಿಗೆ ಸಹಾಯ ಹಸ್ತ ಚಾಚಿದರು
ನಾಗರೀಕರಿಂದ ಪಡೆದ ಸಾಮಾನು ಸರಂಜಾಮುಗಳನ್ನು ವಿವಿಧ ಸಂಘಟನೆಯ ಪದಾಧಿಕಾರಿಗಳು ಸ್ವತಃ ಕೊಡಗಿಗೆ ತೆರಳಿ ಅಲ್ಲಿನ ಸಂತ್ರಸ್ತರಿಗೆ ನೇರವಾಗಿ ಅವಶ್ಯಕ ವಸ್ತುಗಳನ್ನು ತಲುಪಿಸುವ ಮೂಲಕ ಕುಣಿಗಲ್ ಜನತೆಯ ಕೃಪೆಗೆ ಪಾತ್ರರಾಗಿದ್ದಾರೆ.
![](https://prajapragathi.com/wp-content/uploads/2018/08/22-Kuni-Kodagu.jpg)