ಬೆಂಗಳೂರು
ವಾಹನ ಚಾಲನಾ ಪರೀಕ್ಷೆಯಲ್ಲಿ ಪಾಸಾಗಿದ್ದವರಿಗೆ ಚಾಲನಾ ಪರವಾನಗಿ ನೀಡಲು ವಿಳಂಬ ಮಾಡುವ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸ್ವಿಗ್ಗಿ ಚಾಲಕರಿಗೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೆಲ ಸಾರಿಗೆ ಅಧಿಕಾರಿಗಳು ಲಂಚದ ಕಾರಣಕ್ಕೆ ಕುಂಟು ನೆಪವೊಡ್ಡಿ ಚಾಲನಾ ಪರೀಕ್ಷೆಯಲ್ಲಿ ಪಾಸಾಗಿದ್ದವರಿಗೆ ಚಾಲನಾ ಪರವಾನಗಿ ನೀಡಲು ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಅಂತಹ ಅಧಿಕಾರಿಗಳ ವಿರುದ್ದ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಇಲಾಖೆ ಅಧಿಕಾರಿಗಳು ನಿಯಮ ಪಾಲಿಸಿದವರಿಗಷ್ಟೇ ಚಾಲನಾ ಪರವಾನಗಿಯನ್ನು ಕಡ್ಡಾಯವಾಗಿ ನೀಡಿದರೆ ಬಹುತೇಕ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯ ಆದರೆ ಕೆಲವರು ಹಣದ ಆಸೆಗಾಗಿ ಸಂಚಾರ ನಿಯಮದ ಪರೀಕ್ಷೆಯಲ್ಲಿ ಫೇಲಾದರೂ ಚಾಲನಾ ಪರವಾನಗಿ ನೀಡುತ್ತಿರುವುದರಿಂದ ಅಪಘಾತ ಹೆಚ್ಚಾಗಲು ಕಾರಣವಾಗುತ್ತದೆ ಇದನ್ನು ತಪ್ಪಿಸಲು ಸಂಚಾರ ನಿಯಮದ ಪಾಸಾದವರಿಗೆ ಮಾತ್ರ ಪರವಾನಗಿ ನೀಡುವುದನ್ನು ಕಟ್ಟುನಿಟಾಗಿ ಜಾರಿಯಾಗಬೇಕು ಎಂದು ತಿಳಿಸಿದರು.
ಚಾಲಕರು ಎಷ್ಟೇ ಸುರಕ್ಷಿತದಿಂದ ವಾಹನ ಚಲಾಯಿಸಿದರು ಕೆಲವೊಮ್ಮೆ ಅಪಘಾತಗಳು ಸಂಭವಿಸಲಿದೆ.ರಸ್ತೆಗಳು ಸರಿಯಾಗಿದ್ದರೂ ಬಹುತೇಕ ಸಮಯಗಳಲ್ಲಿ ಅಜಾಗರೂಕತೆ ಅಪಘಾತ ಉಂಟಾಗಲಿದೆ ಇದರಿಂದ ಜಾಗರೂಕತೆಯಿಂದ ವಾಹನ ಚಲಾಯಿಸಿ ನಿಮ್ಮನ್ನು ನಂಬಿ ಇಡೀ ಕುಟುಂಬ ಇರಲಿದೆ ಎನ್ನುವುದನ್ನು ಮರೆಯಬೇಡಿ ಎಂದರು.
ಕಳೆದೊಂದು ದಶಕದಲ್ಲಿ ಜನಸಂಖ್ಯೆಯ ಪ್ರಮಾಣ ಶೇ. 3.2ರಷ್ಟು ಹೆಚ್ಚಾದರೆ, ವಾಹನಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಸರಿಸುಮಾರು ರಾಜ್ಯದಲ್ಲಿ 2 ಕೋಟಿಗೂ ಅಧಿಕ ವಾಹನಗಳಿವೆ. ಹೊಸದಾಗಿ ವಾಹನ ಖರೀದಿಸುವವರಿಗೆ ಪಾರ್ಕಿಂಗ್ ಎಲ್ಲಿ ಮಾಡುತ್ತಾರೆ ಎನ್ನುವುದನ್ನು ಖಾತ್ರಿಪಡಿಸಿಕೊಂಡು ವಾಹನ ನೋಂದಣಿ ಮಾಡುವ ನಿಯಮ ಜಾರಿಗೆ ತಂದರೆ ವಾಹನಗಳ ನೋಂದಣಿ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದರು.
ಸ್ವಿಗ್ಗಿ ಕಾರ್ಯಾಚರಣೆಯ ಉಪಾಧ್ಯಕ್ಷ ಸಚಿನ್ ಕೋಟಂಗಾಲೆ ಮಾತನಾಡಿ, ಚಾಲಕರ ಸೇವೆ ಬೆಲೆಕಟ್ಟಲಾಗದ್ದು, ಚಾಲಕರ ಸುರಕ್ಷಿತೆಗಾಗಿ ವಿಮಾ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ರಸ್ತೆಯಲ್ಲಿ ವಾಹನ ಓಡಿಸುವಾಗ ಎಚ್ಚರಿಕೆ ವಹಿಸಿ ಜೀವ ಅಮೂಲ್ಯವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೌಂಡ್ ಟೇಬಲ್ ಇಂಡಿಯಾ ಅಧ್ಯಕ್ಷ ಧ್ರುವ್ ದಾಲ್ಮಿಯ, ಎಂಗ್ ಇಂಡಿಯಾ ಅಧ್ಯಕ್ಷ ಅಜಿತ್ ಮ್ಯಾಥ್ಯುಜಾರ್ಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
