ಪ್ರತ್ಯೇಕ ರಾಜ್ಯ : ಸಮಿಶ್ರ ಸರ್ಕಾರವನ್ನು ಬೆದರಿಸಲು ಹೇಳಿದ್ದು – ಶ್ರೀರಾಮುಲು ಸ್ಪಷ್ಟನೆ

 ಕೊಟ್ಟೂರು: 

Related image
      ಅಖಂಡ ಕರ್ನಾಟಕ ಕಡೆಗೆ ನನ್ನ ಒಲವು ಮತ್ತು ನಿಲವು ಇದು ನನ್ನ ಅಚಲವಾದ ನಿರ್ಧಾರ ಇದರಲ್ಲಿ ಎರಡು ಮಾತಿಲ್ಲ ಎಂದು ಬಿಜೆಪಿ ಮುಖಂಡ ಮೊಣಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದರು.

      ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರವನ್ನು ಬೆದರಿಸಲು ನಾನು ಪ್ರತ್ಯೇಕ ರಾಜ್ಯದ ಮಾತನ್ನು ಹೇಳಿದ್ದೆ ಅಷ್ಟೇ ಎಂದರು.

     ನಾನು ಹಾಗೆ ಹೇಳಿದ್ದಕ್ಕೆ ಕಾರಣ ಇಷ್ಟೇ. ಹೈದರಾಬಾದ್ ಕರ್ನಾಟಕನ್ನು ನಿರ್ಲಕ್ಷ್ಯ ಮಾಡಿದರೆ ಎಚ್ಚರಿಕೆ ಎಂಬ ಸಂದೇಶವನ್ನು ರವಾನಿಸಬೇಕಿತ್ತು ಎಂದು ಸ್ಪಷ್ಟ ಪಡಿಸಿದರು.

      ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಸಹೋದರಿ, ನಮ್ಮ ಸಮುದಾಯದಲ್ಲಿ ಅಸ್ಥಿ(ಚಿತಾಭಸ್ಮ)ಯಾರೂ ಮುಟುವಂತ್ತಿಲ್ಲ. ಎಲ್ಲಾ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದ್ದೇವೆ. ಆದರೂ ಈ ಬಿಜೆಪಿಯವರು ಆಸ್ಥಿಯನ್ನು ತೆಗೆದುಕೊಂಡು ದೇಶದ ನಾನಾ ನದಿಗಳನ್ನು ಬಿಡುತ್ತಿದ್ದಾರೆ ಇದು ಸರಿಯಲ್ಲ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ.

      ವಾಜಪೇಯಿ ಬದುಕಿದ್ದಾಗ, ನನ್ನ ದೇಹದ ಪ್ರತಿಯೊಂದು ಭಾಗವೂ ಈ ದೇಶಕ್ಕೆ ಅರ್ಪಣೆ ಎಂದು ಹೇಳಿದ್ದರು. ಅವರು ಇಡೀ ದೇಶದ ಆಸ್ತಿ ಆದ್ದರಿಂದ ಅವರ ಅಸ್ಥಿಯನ್ನು ದೇಶದ ನಾನಾ ನದಿಗಳನ್ನು ವಿಸರ್ಜಿಸುತ್ತೇವೆ. ಇದರಲ್ಲಿ ಯಾವುದೇ ಗಿಮಿಕ್ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.

      ಕೇಂದ್ರ ಸರ್ಕಾರ ಪಟ್ಟಣಗಳ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದೆ. ಆದ್ದರಿಂದ ಕುಡತಿನಿ, ಕೊಟ್ಟೂರು ಪಟ್ಟಣ ಪಂಚಾಯ್ತಿ ಬಿಜೆಪಿ ಆಡಳಿತ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

      ಮಾಜಿ ಶಾಸಕ ನೇಮಿರಾಜ್ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ, ಬಿಜೆಪಿ ಮುಖಂಡರಾದ ಎಂ.ಎಂ.ಜೆ. ಸ್ವರೂನಂದ, ಶೆಟ್ಟಿ ತಿಂದಪ್ಪ ಮತ್ತು ಪಟ್ಟಣ ಪಂಚಾಯ್ತಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಜರಿದ್ದರು.
      ಕೊಟ್ಟೂರುನಲ್ಲಿ ಪಟ್ಟಣ ಪಂಚಾಯ್ತಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಶಾಸಕ ಶ್ರೀರಾಮುಲು ರೋಡ್ ಶೋ ನಡೆಸಿದರು. ಮಾಜಿ ಶಾಸಕ ನೇಮಿರಾಜ ನಾಯ್ಕ, ಬಿಜೆಪಿ ಮುಖಂಡ ಶೆಟ್ಟಿ ತಿಂದಪ್ಪ ಮುಂತಾದವರು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link