ತುಮಕೂರು:
ಶ್ರೀರಾಮ,ಸೀತಾ,ಲಕ್ಷ್ಮಣ ಸಹಿತ ಶ್ರೀಅಂಜನೇಯಸ್ವಾಮೀ ದೇವಸ್ಥಾನದ ರಾಜಗೋಪುರ ಹಾಗೂ ವಿಮಾನ ಗೋಪುರದ ಕಳಸ ಸ್ಥಾಪನೆ ಹಾಗೂ ಕುಂಭಾಭೀಷೇಕ ಮಹೋತ್ಸವದ ಅಂಗವಾಗಿ ನಗರದ ಶ್ರೀರಾಮ ಸೇವಾ ಸಮಿತಿ(ರಿ) ಆವರಣ,ಚಿಕ್ಕಪೇಟೆ ತುಮಕೂರಿನಲ್ಲಿ,ಗ್ರಾಮೀಣ ಕ್ರಿಯಾತ್ಮಕ ರಂಗತಂಡ(ರಿ),ತುಮಕೂರು,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ನಾಟಕಗಳು ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ.
ಶ್ರೀರಾಮ ಸೇವಾ ಸಮಿತಿ ಆಯೋಜಿಸಿದ್ದ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ನಿಮಿತ್ತ ನಡೆದ ಹಾಸ್ಯ ನಾಟಕಗಳ ಪ್ರದರ್ಶನದಲ್ಲಿ ಶ್ರೀ ಅಮರೇಶ್ವರ ವಿಜಯ ನಾಟಕ ಮಂಡಳಿ ಕಲಾವಿದರು ಯು.ಗೋವಿಂದೇಗೌಡ ರಚಿಸಿ, ಬಿ.ಎ.ಧನ್ವಂತರಿ ನಿರ್ದೇಶನದಲ್ಲಿ ಪ್ರದರ್ಶಿಸಿದ “ಮಿಸ್ಟರ್ ಡೂಪ್ಲಿಕೇಟ್” ನಾಟಕ,ಎಲ್ಲಾ ವೃತ್ತಿಯಲ್ಲಿಯೂ ಇಂದು ನಕಲಿ ಎಂಬುದು ತಾಂಡವಾಡುತ್ತಿದೆ.ಅದರಲ್ಲಿಯೂ ವೈದ್ಯೋ ನಾರಾಯಣೋ ಹರಿ ಎಂಬ ವೈದ್ಯಕೀಯ ವೃತ್ತಿಯಲ್ಲಿಯೂ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು,ಸರಿಯಾದ ಜ್ಞಾನವಿಲ್ಲದ ವೈದ್ಯರು ರೋಗಿಯ ಜೀವಕ್ಕೆ ಕುತ್ತು ತಂದರೆ, ಕೆಲ ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಮರೆತು, ರೋಗಿಗಳ ಅಂಗಾಂಗಗಳಿಗೆ ಕತ್ತÀÀರಿ ಹಾಕಿ ಸಿಕ್ಕಿಬಿಳುವ ಕಥಾ ವಸ್ತುವನ್ನು ಒಳಗೊಂಡ ನಾಟಕ, ವೈದ್ಯರು ಮತ್ತು ರೋಗಿಗಳ ನಡುವಿನ ಕಚಗುಳಿ ಇಡುವ ಸಂಭಾಷಣೆಗಳು ಪ್ರೇಕಕ್ಷರನ್ನು ನೆಗೆಗಡಲ್ಲಲಿ ತೇಲಿಸಿದವು.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಕಲಾವಿದರು ನಡೆಸಿಕೊಟ್ಟ ಜಾಗೃತಿ ಗೀತೆಗಳ ಗಾಯನ ಮತ್ತು “ಶುದ್ದೀಕರಣ” ನಾಟಕ ಸಮಾಜದಲ್ಲಿರುವ ಹಲವು ಸಾಮಾಜಿಕ ಪೀಡುಗುಗಳಾದ ಬಡವನ,ನಿರುದ್ಯೋಗ,ಅಸ್ಪøಷ್ಯತೆ ಜೊತೆಗೆ, ಇಂದಿನ ಅನೈರ್ಮಲ್ಯದ,ವೈಜ್ಞಾನಿಕ ಕಸವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶಿಸಿ,ಹಾಸ್ಯ, ವಿಡಂಬನೆಯ ಜೊತೆಗೆ, ಸಾಮಾಜಿಕ ಸಂದೇಶವನ್ನು ಸಾರಿದರು.(ಫೊಟೋ ಇದೆ)