ಪಾವಗಡ :-
ಇದೇ ತಿಂಗಳು 29 ನಡೆಯಲಿರುವ ಪುರಸಭಾ ಚುನಾವಣೆಯಲ್ಲಿ ತಪ್ಪದೆ ಪ್ರತಿ ಯೋಬ್ಬರು ಮತದಾನ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸಾಭಿತು ಪಡೆಸಲು ಮುಖಂಡರು ಸಂಘಟಿತರಾಗಿ ಪುರಸಭೆಯನ್ನು ಕಾಂಗ್ರೇಸ್ ವಶಕ್ಕೆ ಪಡೆಯ ಬೇಕೆಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ 14,16,17,22,21 ನೇ ವಾರ್ಡ್ಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಮಾತನಾಡಿ ಪುರಸಭೆ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಪ್ರಮುಖ ಚುನಾವಣೆಯಾಗಿದೆ ಎಂದರು.
ಪಟ್ಟಣ ಅಭಿವೃದ್ದಿಯಾಗಬೇಕೆಂದರೆ ಕಾಂಗ್ರೇಸ್ ಪಕ್ಷಕ್ಕೆ ಆದಿಕಾರ ನೀಡಿದಾಗ ಮಾತ್ರ ಸಾಧ್ಯ ಎಂದಾ ಅವರು ಅಭ್ಯರ್ಥಿಗಳು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ವಾರ್ಡ್ನಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋಡುವ ಜವಬ್ದಾರಿ ನಮದ್ದು ಹಾಗಾಗಿ ಈ ಭಾರಿ ಹೆಚ್ಚು ಸ್ಥಾನಗಳನ್ನು ಗೆದ್ದು ಒಂಟಿ ಬಲದ ಮೇಲೆ ಆದಿಕಾರ ಹಿಡಿಯುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಪಕ್ಷ ಸಂಘಟಿಸಿ ಮತಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಹೆಚ್.ವಿ.ವೆಂಕಟೇಶ್, ಮಾಜಿ ಶಾಸಕರಾದ ಸೋಮ್ಲನಾಯ್ಕ್ , ಅಭ್ಯರ್ಥಿಗಳಾದ ರಾಜೇಶ್ ,ರವಿ,ಮುಖಂಡರಾದ ವಿಜಿ,ವಿಶ್ವನಾಥ್ ಉಪಸ್ಥಿತರಿದ್ದರು.