ಕೊರಟಗೆರೆ:-
ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಬಿಎಂಸಿ ಘಟಕ ಹಾಗೂ ನೂತನ ಕಟ್ಟಡಗಳ ಉದ್ಘಾಟನೆಯನ್ನು ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೆ.6ರ ಗುರುವಾರ ಬೆಳ್ಳಿಗ್ಗೆ 10.30ಕ್ಕೆ ಸಿದ್ದಬೇಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರದ ಶ್ರೀಹನುಮಂತನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಹೊಳವನಹಳ್ಳಿ, ಎಂ.ಗೊಲ್ಲಹಳ್ಳಿ, ತಿಮ್ಮಸಂದ್ರ, ನರಸಾಪುರ, ಚಿಕ್ಕದೊಡ್ಡವಾಡಿ, ಬೆಂಡೋಣಿ, ಕುರುಂಕೋಟೆ ಗ್ರಾಮದ ಸಂಘಗಳ ಬಿಎಂಸಿ ಘಟಕ ಹಾಗೂ ಹೊಸಪೇಟೆ, ವಜ್ಜನಕುರಿಕೆ, ಸಂಕೇನಹಳ್ಳಿ, ಗೌರಗಾನಹಳ್ಳಿ, ಗೌಜಗಲ್ಲು, ಕಬ್ಬಿಗೆರೆ ಮತ್ತು ಹಂಚಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಟ್ಟಡಗಳ ಉದ್ಘಾಟನೆಯನ್ನು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನೂತನ ಕಟ್ಟಡಗಳ ಉದ್ಘಾಟನೆ ಸಂಸದ ಮುದ್ದಹನುಮೇಗೌಡ, ಸಮಾರಂಭದ ಉದ್ಘಾಟನೆ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪಶು ಆಹಾರ ಕೊಠಡಿಗಳ ಉದ್ಘಾಟನೆ ಹಾಲು ಮಹಾ ಮಂಡಲಿಯ ನಿರ್ದೇಶಕ ಚಂದ್ರಶೇಖರ್, ಅಧ್ಯಕ್ಷತೆ ನಿರ್ದೇಶಕ ಎಂ.ಪಿ.ವಿಜಯಶಂಕರ್ ಮತ್ತು ಎಎಂಸಿಯು ಘಟಕಗಳ ಉದ್ಘಾಟನೆಯನ್ನು ಬಿ.ಮುನೇಗೌಡರು ವ್ಯವಸ್ಥಾಪಕ ನಿರ್ದೇಶಕ ತುಮಕೂರು ನೇರವೆರಿಸಲಿದ್ದಾರೆ.