ಕೊರಟಗೆರೆ
ಬಹುಜನ ಸಮಾಜದ ರಾಜಕೀಯ ಹಿತಕ್ಕಾಗಿ 1984 ರಲ್ಲಿ ಡಾ.ಬಾಬಾಸಾಹೇಬ್ಅಂಬೇಡ್ಕರ್ ಜಯಂತಿಯಂದು ಕಾನ್ಶಿರಾಮ್ ಸ್ಥಾಪಿತ ಪಕ್ಷ ಬಿಎಸ್ಪಿ ಆಗಿದೆ. ಎಸ್.ಸಿ., ಎಸ್.ಟಿ., ಓಬಿಸಿ, ಅಲ್ಪಸಂಖ್ಯಾತರೆಲ್ಲ ಸೇರಿ ರಾಜಕೀಯ ಅಧಿಕಾರದ ನೆಲೆಗಟ್ಟಿನಲ್ಲಿ ಬಿಎಸ್ಪಿ ಪಕ್ಷದ ತತ್ವ್ವಾದರ್ಶದ ನೆರಳಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಅಲ್ಲದೆ ಬಿಎಸ್ಪಿ ದೇಶದ 3ನೇ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ. ರಂಗಧಾಮಯ್ಯ ಪಟ್ಟಣದ ಅಂಬೇಡ್ಕರ್ ಕೋಚಿಂಗ್ ಸೆಂಟರ್ನಲ್ಲಿ ಬುಧವಾರ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ.ಎಸ್.ಪಿ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಗೆಲುವಿಗೆ ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಜಿಲ್ಲಾಧ್ಯಕ್ಷ್ಷ ದಾಸಪ್ಪ ನುಡಿದರು. ಸಿದ್ದಲಿಂಗಯ್ಯ, ಅಂಜಿನಪ್ಪ, ರುದ್ರಪ್ಪ, ರಂಗಯ್ಯ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.
ತುಮಕೂರು ಮಹಾ ನಗರ ಪಾಲಿಕೆಗೆ ಸ್ಪರ್ಧಿಸಿರುವ ಬಿಎಸ್ಪಿ ಪಕ್ಷದ ವಾರ್ಡ್ವಾರು ಅಭ್ಯರ್ಥಿಗಳ ವಿವರ ಹೀಗಿದೆ. 2 ನೇ ವಾರ್ಡ್ –ಚಿಕ್ಕಣ್ಣ, 10 ನೇ ವಾರ್ಡ್ – ಶಾಹೀನ, 12 ನೇ ವಾರ್ಡ್- ದಾಕ್ಷಾಯಿಣಿ, 17 ನೇ ವಾರ್ಡ್ – ಸೈಯದ್ ಮಹಮದ್ ಮೆಹಬುಲ್ಲಾ, 19 ನೇ ವಾರ್ಡ್- ಆಶಾ, 20 ನೇ ವಾರ್ಡ್ – ಅಬ್ಬಾಸ್ ಅಲಿ, 24 ನೇ ವಾರ್ಡ್ – ರಾಮಲಿಂಗಯ್ಯ ಮತ್ತು 35 ನೇ ವಾರ್ಡ್ – ಮಂಜುಳ ಎಂ.ಡಿ ಅಲ್ಲದೆ ಮಧುಗಿರಿ ಪುರಸಭೆಯ 23 ನೇ ವಾರ್ಡ್ನ ಶ್ರೀಹರಿ ಗಣೇಶನ್, ಚಿಕ್ಕನಾಯಕನಹಳ್ಳಿ ಪುರಸಭೆಯ 23 ನೇ ವಾರ್ಡ್ನ ವಿಶಾಲಾಕ್ಷಿ ಕಣದಲ್ಲಿದ್ದಾರೆ ಎಂದು ದಾಸಪ್ಪ ತಿಳಿಸಿದ್ದಾರೆ.
