ಮಂಡ್ಯ:ಮಂಡ್ಯ ಜಿಲ್ಲೆ ಪಾಂಡವಪುರದ ಬಸ್ ಭೀಕರ ದುರಂತದಲ್ಲಿ ಮೃತಪಟ್ಟ ವದೆ ಸಮುದ್ರ ಗ್ರಾಮದ ೮ ಮಂದಿಯ ಸಾಮೂಹಿಕ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ನೆರವೇರಿಸಿದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವದೇ ಸಮುದ್ರ ಗ್ರಾಮದ ಹೊರ ವಲಯದ ಸಶ್ಮಾನದಲ್ಲಿ ೮ ಮಂದಿಯನ್ನು ಒಂದೇ ಕಡೆ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಿದರು.
ಗ್ರಾಮದ ಚಿಕ್ಕಯ್ಯ, ಕರಿಯಪ್ಪ, ಮೊಮ್ಮಗ ಪ್ರಶಾಂತ್, ರವಿಕುಮಾರ್, ಕಮಲಮ್ಮ, ಶಶಿಕಲಾ, ರತ್ನಮ್ಮ ಮತ್ತು ಪವಿತ್ರ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಜಮಾವಣೆಗೊಂಡಿದ್ದರು.
ದುರಂತದಲ್ಲಿ ಸಾವನ್ನಪ್ಪಿದ್ದ ಪ್ರತಿ ಕುಟುಂಬಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಸಾವಿರ ಸಹಾಯಧನ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆದೇಶದ ಮೇರೆಗೆ ತುರ್ತು ಸ್ಪಂದನೆ ಮಾಡಿ ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ನೇತೃತ್ವದಲ್ಲಿ ಚೆಕ್ ವಿತರಣೆ ಮಾಡಿ ಭಗವಂತ ಮೃತ ಕುಟುಂಬಗಳ ಬಂಧುಗಳಿಗೆ ಶಾಂತಿ, ನೆಮ್ಮದಿ ದೊರಕಿಸಲಿ ಎಂದು ಸಂತಾಪ ವ್ಯಕ್ತಪಡಿಸಿದರು.
![](https://prajapragathi.com/wp-content/uploads/2018/11/345250.gif)