ದಾವಣಗೆರೆ:
ನಗರದ ರಸ್ತೆ, ಚರಂಡಿಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ವೈದ್ಯಕೀಯ ತಾಜ್ಯ ಸುರಿದಿದ್ದ ಹಾಗೂ ಸಮರ್ಪಕವಾಗಿ ಮೆಡಿಕಲ್ ವೇಸ್ಟ್ ನಿರ್ವಹಣೆ ಮಾಡದಿದ್ದ ಆಸ್ಪತ್ರೆ, ಲ್ಯಾಬ್, ನರ್ಸೀಂಗ್ ಹೋಂ, ಡಯಗ್ನೆಸ್ಟಿಕ್ ಸೆಂಟರ್ಗಳ ವಿರುದ್ಧ ಪಾಲಿಕೆ ನೋಟೀಸ್ ಜಾರಿ ಮಾಡಿದಲ್ಲದೆ, ಕೆಲವನ್ನೂ ಸೀಜ್ ಮಾಡಿದ್ದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಕೀಯ ತಾಜ್ಯ ಸುರಿಯುವುದು ಮಾತ್ರ ಇನ್ನೂ ನಿಂತಿಲ್ಲ.
ಶುಕ್ರವಾರ ನಗರದ ವಿಶ್ವೇಶ್ವರಯ್ಯ ಉದ್ಯಾನವನದ ಹಿಂಭಾಗದಲ್ಲಿ ವೈದ್ಯಕೀಯ ತಾಜ್ಯ ಸುರಿದಿರುವುದನ್ನು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಸಿಬ್ಬಂದಿಗಳೇ ಪತ್ತೆ ಹಚ್ಚಿದ್ದಾರೆ. ಇಲ್ಲಿ ಪತ್ತೆಯಾಗಿರುವ ವೈದ್ಯಕೀಯ ತಾಜ್ಯದಲ್ಲಿ ನಿಡ್ಲ್, ಸಿರಂಜ್ ಸೇರಿದಂತೆ ಹಲವು ಅಪಾಯಕಾರಿ ವೈದ್ಯಕೀಯ ವಸ್ತುಗಳು ಕಂಡು ಬಂದಿವೆ.
ಇಲ್ಲಿ ಪತ್ತೆಯಾಗಿರುವ ವೈದ್ಯಕೀಯ ತಾಜ್ಯವನ್ನು ಪಿಜೆ ಬಡಾವಣೆಯಲ್ಲಿರುವ ಮಿತ್ರ ಡಯಾಗ್ನಸ್ಟೀಕ್ ಸೆಂಟರ್ ನವರು ಎಸೆದಿದ್ದು, ಡಯಾಗ್ನಸ್ಟಿಕ್ ಸೆಂಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
