ಶಿಗ್ಗಾವಿ :
ರಾಷ್ಟ್ರಕಂಡ ಅಪ್ರತಿಮ ವೀರ, ಶೂರರ ಬಗ್ಗೆ ಮಾಡಿದ ಸಮೀಕ್ಷೇಯಲ್ಲಿ ಶಿವಾಜಿ ಮಹಾರಾಜರು ಮೊದಲಿಗರಾಗಿದ್ದಾರೆ ಎಂದು ಖ್ಯಾತ ಅಂಕಣಕಾರ ಹಾಗೂ ವಾಗ್ಮಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.
ಪಟ್ಟಣದ ವಿಠಲ ರುಕುಮಾಯಿ ದೇವಸ್ಥಾನದ ಸಭಾಭವನದಲ್ಲಿ ಕ್ಷತ್ರೀಯ ಮರಾಠಾ ಸಮಾಜದ ಶಹರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ಕುಲದಲ್ಲಿ ಹುಟ್ಟುವುದಷ್ಟೇ ಅಲ್ಲ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ, ಎಲ್ಲರಂತೆ ಖಡ್ಗ ಹಿಡಿದವ ಶಿವಾಜಿಯಾಗಿರಲಿಲ್ಲ ಇತಿಹಾಸ ಸೃಷ್ಟಿಸುವ ಉದ್ದೇಶ ಹೊಂದಿದ ಶಿವಾಜಿ ಮಹಾರಾಜರು “ಹಿಂದುವಿ” ಸಾಮ್ರಾಜ್ಯವನ್ನು ಮರುಕಟ್ಟಲಿಕ್ಕೆ ಶಿವಾಜಿ ಮಹಾರಾಜರು ಮರುಜ್ಮತಾಳಿದ್ದರು, ಎದುರಾಳಿಗೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಯುದ್ದದ ಮೂಲಕವೇ ತಕ್ಕ ಉತ್ತರ ನೀಡುವವರಾಗಿದ್ದರು.
ಶಿವಾಜಿ ಮಹಾರಾಜರ ಸಂಸ್ಕಾರ ಹೇಗಿತ್ತೇಂದರೇ, ಕೇವಲ ಸೈನಿಕರೊರಗೂಡಿ ಯುದ್ದ ಮಾಡುವುದಷ್ಟೇ ಕೆಲಸವಾಗಿರಲ್ಲಿಲ್ಲ ಜೊತೆಗೆ ರೈತರಾಗಿ ಬೆಳೆಗಳನ್ನು ಕಾಪಾಡಿ ಸಂರಕ್ಷಿಸುವ ಮೂಲಕ ಭ್ರಷ್ಟಾಚಾರ ರಹಿತ ಆಡಳಿತ ನೀಡಿದವರಾಗಿದ್ದರು, ಗೋಹತ್ಯೆ, ದೇವಸ್ಥಾನಗಳ ಮೇಲೆ ಮಾಡುತ್ತಿದ್ದ ದಬ್ಬಾಳಿಕೆಯನ್ನು ಸಹಿಸದ ದೀರ ರಾಜನಾಗಿದ್ದರು ಎಂದರು.
ಕ್ಷತ್ರೀಯ ಮರಾಠಾ ಸಮಾಜದ ಜಿಲ್ಲಾದ್ಯಕ್ಷ ಎಮ್ ಎನ್ ವೆಂಕೋಜಿ ನೂತನ ಶಹರ ಘಟಕ ಉದ್ಘಾಟಿಸಿ ಮಾತನಾಡಿ, ಬಿಕ್ಷೆ ಬೇಡುವ ಸಮಾಜ ನಮ್ಮದಲ್ಲ, ನೂತನ ಶಹರ ಘಟಕದಿಂದ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ದೃಷ್ಟಿಯಿಂದ ಶೈಕ್ಷಣಿಕವಾಗಿ ಮುಂದೆ ಬರಲು ಶೈಕ್ಷಣಿ ಸಂಸ್ಥೆಗಳನ್ನು ತೆರೆಯುವ ಯೋಜನೆಯನ್ನು ನೂತನ ಶಹರ ಘಟಕ ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.
ಕ್ಷತ್ರೀಯ ಮರಾಠಾ ಸಮಾಜದ ತಾಲೂಕಾದ್ಯಕ್ಷ ಸುಭಾಸ್ ಚೌವ್ಹಾಣ್ ಮಾತನಾಡಿ, ಸಂಘಟನೆಗಳೆಂದರೆ ಎಡರು – ತೊಡರು ಸಹಜ, ಅವುಗಳನ್ನು ಎದುರಿಸಿ ಎಂದು ಸಲಹೆ ನೀಡಿದ ಅವರು ಈಗಾಗಲೇ ಸಮಾಜಕ್ಕೆ 4 ಗುಂಟೆ ಜಾಗವನ್ನು ನೀಡಿದ್ದೇನೆ ಅದನ್ನು ಮುನ್ನೆಡೆಸಿ ಮುಂದಿನ ಕಾರ್ಯಗಳ ಬಗ್ಗೆ ಮುಂದುವರೆಯಲು ಯುವ ಸಮೂಹದಿಂದ ಕೂಡಿದ ನೂತನ ಶಹರ ಘಟಕ ತೆರೆಯುವುದು ಸಂತೋಷವಾಗಿದ್ದು ಜೊತೆಗೂಡಿ ಮುಂದಿರುವ 2ಎ ಮಾನ್ಯತೆಯೊಂದನ್ನು ಕೊಡಿಸುವ ಕಡೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿದ್ಯವನ್ನು ಬೆಂಗಳೂರ ಗೋಸಾಯಿಮಠದ ಶ್ರೀ ಬುದ್ದಿಯೋಗಾನಂದ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಶಿಗ್ಗಾವಿ ಭಾವನಮಠದ ಶ್ರೀ ಚಂದ್ರಪ್ಪಜ್ಜನವರು ವಹಿಸಿ ಆಶೀರ್ವಚಿಸಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ನೂತನ ಶಹರ ಘಟಕದ ಅದ್ಯಕ್ಷ ಲಕ್ಷ್ಮಣ ಕುಂದಗೋಳ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಛತ್ರಪತಿ ಶಿವಾಜಿ ಮಹಾರಾಜರ ಕ್ಷೇಮಾಭಿವೃದ್ದಿ ಸೌಹಾರ್ದ ಸಹಕಾರಿ ನಿಯಮಿತದ ಅದ್ಯಕ್ಷ ಯಲ್ಲಪ್ಪ ಶ್ಯಾಬಳ, ಈರಪ್ಪ ಹೋಟ್ಟೂರ, ಶಿವಪ್ಪ ಕೇರಪ್ಪನವರ, ಭೀಮಣ್ಣ ಕಾಳೆ, ತುಕಾರಾಮ ಬಾಗೆವಾಡಿ, ಅರವಿಂದ ಕಾಮನಹಳ್ಳಿ, ದವಲತರಾಯ್ ಯಲಿವಾಳ, ಪರಶುರಾಮ ಗಣಪ್ಪನವರ, ಫಕ್ಕೀರಪ್ಪ ಸಂತಬಾನವರ, ಪರಶುರಾಮ ಕುಂದಗೋಳ ಸೇರಿದಂತೆ ನೂತನ ಶಹರ ಘಟಕದ ಉಪಾದ್ಯಕ್ಷರಾದ ಫಿರೋಜ ಕಾಮನಹಳ್ಳಿ, ಜ್ಯೋತಿಬಾ ಪುಳೆ, ಪ್ರಧಾನ ಕಾರ್ಯದರ್ಶಿ ಅನಿಲ ಹುಣಸೀಕಟ್ಟಿ, ಮಂಜುನಾಥ ಗಣಪ್ಪನವರ, ತುಕಾರಾಮ ಜಾದವ, ಮಾಧವರಾವ್ ಕಾಮನಹಳ್ಳಿ ಹಾಗೂ ಸರ್ವ ಸದಸ್ಯರು ಸಮಾಜದ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
