ಮಾಜಿ ಶಾಸಕರ ಹೇಳಿಕೆ ಮೂರ್ಖತನದ ಪರಮಾವಧಿ

 ತುಮಕೂರು:

      ನನ್ನ ವಿರುದ್ದ ಆರೋಪ ಮಾಡಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರ ಹೇಳಿಕೆ ಮೂರ್ಖತನದ ಪರಮಾವಧಿಯಿಂದ ಕೂಡಿದೆ ಎಂದು ಶಾಸಕ ಗೌರಿಶಂಕರ್ ವ್ಯಂಗ್ಯವಾಡಿದ್ದಾರೆ.

     ಶಾಸಕ ಗೌರಿಶಂಕರ್ ವಿರುದ್ದ ಭ್ರಷ್ಟಾಚಾರದ ಆರೋಪ

      ತುಮಕೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ನನ್ನ ವಿರುದ್ದ ಮಾಡಿರುವ ಆರೋಪವನ್ನು ಸಾಬೀತು ಮಾಡಿದ್ದಲ್ಲಿ ನಾನು ನೇಣಿಗೇರುತ್ತೇನೆ. ಇಲ್ಲದಿದ್ದರೆ, ಆರೋಪ ಸಾಬೀತು ಪಡಿಸಲು ವಿಫಲವಾದಲ್ಲಿ ಅವರು ನೇಣಿಗೇರಲು ಸಿದ್ದರಿದ್ದಾರಾ? ಎಂದು ಸವಾಲ್ ಹಾಕಿದರು.

     ಶಾಸಕನಾದ ಮೂರು ತಿಂಗಳಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ನನ್ನ ವಿರುದ್ದ ಆರೋಪ ಮಾಡಿರುವ ಅವರು, ಅವರಿಗೆ ಹಣ ದೋಚಿದ ಅನುಭವ ಇರಬಹುದು ಆದ್ದರಿಂದಲೇ ಅವರು ಕಳೆದ 10 ವರ್ಷಗಳಿಂದ ಶಾಸಕರಾಗಿ ಎಷ್ಟು ದೋಚಿದ್ದಾರೆ? ಭ್ರಷ್ಟಾಚಾರದಲ್ಲಿ ಹಣ ಹೊಡೆಯುವ ಅನುಭವ ಇರುವವರೇ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯ ಎಂದು ಟಾಂಗ್ ನೀಡಿದರು. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link