ಮೆಡಿಕಲ್ ಸೀಟ್ ಹಂಚಿಕೆ ಪಾರದರ್ಶಕವಾಗಿದೆ : ಪರಂ ಸ್ಪಷ್ಟನೆ

ತುಮಕೂರು:

Related image

      ಮೆಡಿಕಲ್ ಸೀಟು ಹಂಚಿಕೆಯಲ್ಲಿ. ಯಾವುದೇ ಹಗರಣ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

      ಇಂದು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ನ 2018-19 ಸಾಲಿನ ಎಂಬಿಬಿಎಸ್‌ ಹಾಗೂ ಎಂಜಿನಿಯರಿಂಗ್‌ ನೂತನ ವಿದ್ಯಾರ್ಥಿಗಳ ಫ್ರೆಷರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ, ದೆಹಲಿಯಿಂದಲೇ ಸೀಟು ಹಂಚಿಕೆಯಾಗಿದೆ ಇಲ್ಲಿ ಯಾವುದೇ ಹಗರಣಕ್ಕೆ ಆಸ್ಪದವಿಲ್ಲ, ಹಗರಣವೂ ನಡೆದಿಲ್ಲ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

      ವಿದ್ಯಾರ್ಥಿಗಳು‌ ನೀಟ್ ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಸೀಟು ದೆಹಲಿಯಲ್ಲಿಯೇ ಹಂಚಿಕೆಯಾಗುವುದರಿಂದ ಇದರಲ್ಲಿ ಯಾವುದೇ ಶಾರ್ಟ್ ಕಟ್‌ ಇಲ್ಲ .‌ ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ.‌ ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link