ಕುಣಿಗಲ್:
ಪ್ರತಿಪಕ್ಷಗಳು ಕಣಕ್ಕಿಳಿಸಿರುವ ವ್ಯಕ್ತಿಗಳ ಪೈಕಿ, ಒಬ್ಬರು ಅಪ್ಪನ ನಾಮಬಲದ ಅಭ್ಯರ್ಥಿಯಾದರೆ, ಮತ್ತೊಬ್ಬರು ಕೆಎಎಸ್ ಅಧಿಕಾರಿಯಾಗಿದ್ದು ರಾಜಿನಾಮೆ ನೀಡಿ ಚುನಾವಣೆಗೆ ನಿಂತಿದ್ದಾರೆ ಇವÀರ ಹಿಂದಿನ ಉದ್ದೇಶವೇನು? ಇಂತÀವರಿಂದ ಸಮಾಜಕ್ಕೆ ಏನು ಕೊಡುಗೆ ನೀಡಲು ಸಾಧ್ಯ? ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವ್ಯಂಗ್ಯ ವಾಡಿದರು.
ತಾಲ್ಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಲೋಕೇಶ್ಗೌಡರ ಪರ ಮತಯಾಚಿಸುತ್ತ ಮಾತನಾಡಿದ ಅವರು, ಇಂತವರು ಸಮಾಜ ಸೇವೆ ಮಾಡಲು ಬಂದಿಲ್ಲ. ಬೇರೆ ಏನನ್ನೊ ಮಾಡಲು ಬಂದಿದ್ದಾರೆ. ಪ್ರಾಮಾಣಿಕವಾಗಿ ದುಡಿಯುತ್ತಿರುವ ಲೋಕೇಶ್ಗೌಡರಿಗೆ ಬೆಂಬಲ ನೀಡಿ ಎಂದು ಮತದಾರರಲ್ಲಿ ಕೋರಿದರು.
ಕೊಳೆಯುತ್ತಿರುವ ಕೆರೆ ನೀರು :
ರಾಜ್ಯ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೂ ಒಂದು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಮಾಡಲು ಸಾಧ್ಯವಾಗದ ಶಾಸಕರು ಬರೀ ಸರ್ಕಾರದ ಮೇಲೆ ಆರೋಪ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಕುಣಿಗಲ್ ನಗರದ ನಾಗರಿಕರಿಗೆ ಕುಡಿಯವ ನೀರು ಪೂರೈಕೆ ಮಾಡುತ್ತಿರುವ ದೊಡ್ಡಕರೆಯ ನೀರು ಕೊಳೆತು ವಾಸನೆ ಬರುತ್ತಿದೆ. ಕೆರೆಗೆ ನೀರು ಬಿಡಿಸುವ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ವೈ.ಹೆಚ್.ಹುಚ್ಚಯ್ಯ, ಬೆಂಗಳೂರಿನ ದಾಸರಹಳ್ಳಿ ಮಾಜಿ ಶಾಸಕ ಮುನಿರಾಜುಗೌಡ, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷ ಬಲರಾಂ, ಗ್ರಾಪಂ ಸದಸ್ಯ ಹೊನ್ನೇನಹಳ್ಳಿ ಸುರೇಶ್, ಪುರಸಭಾ ಸದಸ್ಯ ಕೋಟೆನಾಗಣ್ಣ, ಮುಖಂಡರಾದ ಪಾಪಣ್ಣ, ರೇಣುಕಾ, ದೇವರಾಜ, ದಿಲೀಪ್ಗೌಡ, ಚಂದ್ರಶೇಖರ್, ರೇಣುಕಪ್ಪ, ನರಸಿಂಹ, ರಾಜಶೇಖರ್, ರಾಜೇಶ್, ಮುಂತಾದವರು ಭಾಗವಹಿಸಿದ್ದರು.
ನನಗೆ ತಳ ಮಟ್ಟದಿಂದ ಕಾಪೆರ್Çರೇಟ್ ಆಗುವವರೆಗೆ ಬೆಳೆಸಿದ್ದು ಪಕ್ಷ ಮತ್ತು ಮುಖಂಡರು, ನನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಲೇ ಜನರ ಸೇವೆಯನ್ನು ಮಾಡುತ್ತಿದ್ದರಿಂದ ಪಕ್ಷವೇ ನನ್ನ ಗುರ್ತಿಸಿ ಕಣಕ್ಕಿಳಿಸಿದೆ. ನನಗೆ ಎಲ್ಲರೂ ಮತ ನೀಡಿ ಗೆಲ್ಲಿಸಿ. ರಾಜ್ಯ, ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಇಲ್ಲಿಯೂ ನೀವು ಅಧಿಕಾರ ನೀಡಿದರೆ ಉತ್ತಮ ಅಭಿವೃದ್ಧಿ ಕೆಲಸವಾಗುತ್ತವೆ.
-ಲೋಕೇಶ್ಗೌಡ, ಬಿಜೆಪಿ ಅಭ್ಯರ್ಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
