ರಾಣಿ ಚೆನ್ನಮ್ಮನ ಬಗ್ಗೆ ಅಧ್ಯಯನ ಪೀಠ ರಚನೆಯಾಗಬೇಕು-ಶಾಸಕ ರೇಣುಕಾಚಾರ್ಯ

 ಹೊನ್ನಾಳಿ:

      ಕಿತ್ತೂರು ರಾಣಿ ಚನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಸ್ಪಷ್ಟತೆ ಇರದ ಕಾರಣ ವಿಜಯೋತ್ಸವದ ಈ ದಿನವನ್ನೆ ಸರ್ಕಾರ ಜಯಂತ್ಯೋತ್ಸವದ ದಿನವನ್ನಾಗಿ ಆಚರಿಸಲು ಮುಂದಾಗಿದೆ, ಸಮಾಜದ ಕಳಕಳೆಯ ಒತ್ತಾಯವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರುವ ಮೂಲಕ ಸೂಕ್ತವಾದ ದಿನಾಂಕದೊಂದಿಗೆ ಈ ದಿನವನ್ನು ಆಚರಿಸುವಂತೆ ಒತ್ತಾಯಿಸಲಾಗುವುದೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

      ಅವರು ಹೊನ್ನಾಳಿಯಲ್ಲಿ ನಡೆದ ಕಿತ್ತೂರು ರಾಣಿಚೆನ್ನಮ್ಮನ 195ನೇ ವಿಜಯೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ರುಂಡವನ್ನು ಕತ್ತರಿಸಲು ಬಂದ ಬ್ರಿಟಿಷರ ರುಂಡವನ್ನೇ ಕತ್ತರಿಸಿ ಅವರ ವಿರುದ್ದ ಜಯ ತಂದು ಕೊಟ್ಟ ಚೆನ್ನಮ್ಮನ ಸ್ವಾತಂತ್ರ ಹೋರಾಟದ ಕಿಚ್ಚಿನ ಬಗ್ಗೆ ಸರಿಯಾಗಿ ಅರಿಯಲು ಕಿತ್ತೂರುಚೆನಮ್ಮ ಅಧ್ಯಯನ ಪೀಠದ ಮೂಲಕ ಸಾಧ್ಯ ಎಂದರು.

      ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ಪಧಾಧಿಕಾರಿಗಳ ರಚನೆಗೊಂಡ ನಂತರದಲ್ಲಿ ಅವರೊಂದಿಗೆ ಚರ್ಚಿಸಿ ಸಮಾಜ ಭಾಂದವರ ಮನವಿಯಂತೆ ನಗರದಲ್ಲಿನ ರಸ್ತೆ ಅಥವಾ ಯಾವುದಾದರು ವೃತ್ತಕ್ಕೆ ಚೆನ್ನಮ್ಮನ ಹೆಸರಿಡುವ ಬಗ್ಗೆ ಪ್ರಯತ್ನಿಸಲಾಗುವುದೆಂದರು.

      ಹರಪನಹಳ್ಳಿ ಪ್ರಾಧ್ಯಾಪಕ ಹೆಚ್ ಮಲ್ಲಿಕಾರ್ಜುನರವರು ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಉಪನ್ಯಾಸ ನೀಡಿ ಆಂಗ್ಲರನ್ನ ಎದುರಿಸಿದ ಚೆನ್ನಮ್ಮ ಸ್ವತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ, ಕಿತ್ತೂರು ಚೆನ್ನಮ್ಮನ ಮ್ಯೂಸಿಯಮ್ ನಿರ್ಮಾಣಗೊಳ್ಳುವ ಮೂಲಕ ಹದಿನಾರು ವರ್ಷದ ಬಾಲೆ ಹುಲಿಯನ್ನು ಕೊಂದ ಚೆನ್ನಮ್ಮನ ಇತಿಹಾಸದ ಬಗ್ಗೆ ಸರಿಯಾಗಿ ಬೆಳಕು ಚೆಲ್ಲುವಂತಾಗಲೆಂದರು.

       ಪಂಚಮಸಾಲಿ ಸಮಾಜದ ಅಧ್ಯಕ್ಷ ಉತ್ತಂಗಿ ಕೊಟ್ರೇಶ ಮಾತನಾಡಿ, ಚೆನ್ನಮ್ಮನ ವಿಜಯೋತ್ಸವ ಹಾಗೂ ಜಯಂತಿಯ ಬಗ್ಗೆ ಸರ್ಕಾರದಿಂದ ತಿದ್ದುಪಡಿಯ ಆದೇಶವಾಗಬೇಕಿದೆ.ಅಂದಿನ ಸ್ವಾತಂತ್ರದ ಲಾಭವನ್ನ ಎಲ್ಲರೂ ಸ್ವಾದೀಸಿದವರಾಗಿದ್ದು. ಯಾವುದೇ ದಿನ ಆಚರಿಸಿದರೆ ಸರ್ಕಾರಿ ರಜೆ ಬೇಡ ಚೆನ್ನಮ್ಮನ ಬಗ್ಗೆ ವಿದಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಇದು ಸಹಕಾರಗೊಳ್ಳಬೇಕಾದರೆ ಶಾಲೆಗಳಲ್ಲಿ ಚೆನ್ನಮ್ಮನ ಬಗ್ಗೆ ಚರ್ಚಾ ಸ್ಪರ್ದೇಗಳು ನಡೆಯಬೇಕು ಹಾಗೂ ಪಠ್ಯದಲ್ಲಿ ಜೀವನ ಚೆನ್ನಮ್ಮನ ಜೀವನಚರಿತ್ರೆ ಸೇರಿಸಬೇಕಿದೆ. ಲಂಡನನಲ್ಲಿರುವ ಚೆನ್ನಮ್ಮನ ಖಡ್ಗವನ್ನು ಸರ್ಕಾರವು ದೇಶಕ್ಕೆ ತರುವ ಪ್ರಯತ್ನ ನಡೆಸಬೇಕೆಂದರು.

      ಸಮಾರಂಭದಲ್ಲಿ ತಾ ಪಂ ಅಧ್ಯಕ್ಷೆ ಸುಲೋಚನ್ನಮ್ಮಪಾಲಕ್ಷಪ್ಪ, ತಹಶೀಲ್ದಾರ ಮೊಹಮ್ಮದ ಶಿಕ್ಷಣಾಧಿಕಾರಿ ರಾಜೀವ್, ಪಂಚಮಸಾಲಿ ಸಮಾಜದ ಮುಖಂಡರಾದ ಹೆಚ್.ಸೋಮಣ್ಣ ಪಟ್ಟಣಶೆಟಟ್ಟಿ ಪರಮೇಶ, ಹಿರೇಮಠ ಬಸವರಾಜಪ್ಪ, ವೀರೇಶ, ಮಹಿಳಾ ಮುಖಂಡರಾದ ಸಾವಿತ್ರಮ್ಮ ,ಕಲ್ಪನಾ, ಕೋಮಲ, ಭಾರತಿ, ಉಷಾ ಮತ್ತಿತರರು ಉಪಸ್ಥಿತರಿದ್ದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link