ರಾಧಾ ಕೃಷ್ಣರ ವೇಷಭೂಷಣ ಕಾರ್ಯಕ್ರಮ

ಗುತ್ತಲ:

         ಯಾವ ತಂದೆ ತಾಯಿಗಳು ಮಕ್ಕಳಿಗೆ ಪ್ರೀತಿ ಕೊಟ್ಟು ಅವರ ಬೆನ್ನಿಗೆ ನಿಲ್ಲುತ್ತಾರೋ ಆ ಮಕ್ಕಳು ಉತ್ತಮ ಸಾಧನೆ ಮಾಡುಲು ಸಾಧ್ಯವೆಂದು ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ತಿಳಿಸಿದರು.
         ಹೊಸರಿತ್ತಿಯ ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣಜನ್ಮಾಷ್ಠಮಿ ಅಂಗವಾಗಿ ಏರ್ಪಡಿಸಿದ್ದ ರಾಧಾ ಕೃಷ್ಣರ ವೇಷಭೂಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನವೆಂದರೆ ದುಡುಮೆಯಲ್ಲಿ ಕಾಲ ಕಳೆಯದೇ ಪಾಲಕರು ಮಕ್ಕಳ ಜೊತೆ ಮಕ್ಕಳಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿಬೇಕು. ಅಂದಾಗ ಮಾತ್ರ ಪ್ರತಿಯೊಬ್ಬ ಮಗುವು ಒಂದು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
            ಕಾರ್ಯಕ್ರಮದಲ್ಲಿ: ಮಲ್ಲಣ್ಣಾ ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅರುಣಕುಮಾರ ಶೆಟ್ಟರ, ಆಯ್.ಜಿ.ಕೋರಿ.ಮುಖ್ಯೋಪಾಧ್ಯಾರಾದ ರಾಜಾ.ಆರ್.ಬಿ. ಮುಖ್ಯ ಅಥಿತಿಗಳಾಗಿದ್ದರು. ಶಿಕ್ಷಕಿಯರಾದ ಶಂಕ್ರಮ್ಮ ಕೂನಬೇವು ಸ್ವಾಗತಿಸಿದರು. ಸಾಹಿಸ್ತಾ ಸಯ್ಯದ ನಾಗರತ್ನಾಗೌಡ ನಿರೂಪಿಸಿದರು ಪೂಜಾ ಮಡಿವಾಳರ ವಂದಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link