ತುಮಕೂರು:
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕನಾಗಿ ನಾನು ಅಧಿಕಾರದಲ್ಲಿರುವ ಅವಧಿಯವರೆಗೂ ಸರ್ಕಾರಿ ಅಧಿಕಾರಿಗಳು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು, ಕ್ಷೇತ್ರದ ಜನತೆ ಹಾಗೂ ಬಡವರಿಂದ ಸರ್ಕಾರಿ ಕೆಲಸ ಮಾಡಿಕೋಡಲು ಲಂಚಕ್ಕೆ ಬೇಡಿಕೆ ಇಡುವುದು ನನ್ನ ಗಮನಕ್ಕೆ ಬಂದರೆಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಖಡಕ್ ಎಚ್ಚರಿಕೆ ರವಾನಿಸಿದರು.
ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿ ಸಿರಿವಾರ ಗ್ರಾಮ ಪಂಚಾಯ್ತಿಯ ಗೋವಿಂದರಾಜಪುರ ಗ್ರಾಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ರೈತರ, ಬಡವರ ಕಷ್ಟಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು ಒಂದೂ ವೇಳೆ ಅಧಿಕಾರಿಗಳಿಂದ ಸಮರ್ಪಕವಾದ ಪ್ರತಿಕ್ರಿಯೆದೊರಕದಿದ್ದರೆ ಪ್ರತಿ ಸೋಮವಾರ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಜರುಗುವ ಜನತಾದರ್ಶನ ಕಾರ್ಯಕ್ರಮಕ್ಕೆ ಬಂದುತಮ್ಮ ಅಹವಾಲುಗಳನ್ನು ನೇರವಾಗಿ ನನಗೆ ತಿಳಿಸಿದರೆ ಸಂಭಂದಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೆ ಪರಿಹರಿಸುವಂತೆ ಪ್ರಯತ್ನ ಮಾಡುತ್ತೇನೆಯಾವುದೇಅಧಿಕಾರಿಗಳು ಲಂಚಕ್ಕೆ ಬೇಡಿಕೆಇಟ್ಟದನ್ನು ನನ್ನ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳಿಗೆ ಚಳಿಬಿಡಿಸುತ್ತೇನೆ ಎಂದುಗುಡುಗಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಸ್ಟು ಕೆರೆಗಳಿಗೆ ಏತ ನೀರವಾರಿ ಯೋಜನೆ ಮುಖೇನ ನೀರು ಹರಿಸಲಾಗುತ್ತಿದೆ, ನಾಗವಲ್ಲಿ ಕೆರೆಗೂ ಸಹ ಹೇಮಾವತಿ ನೀರು ಹರಿಯಲಿದೆ, ಸರ್ಕಾರ ನಿಗದಿಪಡಿಸಿರುವ 310 ಎಂ.ಸಿ.ಎಪ್.ಟಿ ನೀರಿನಲ್ಲಿಏತ ನೀರವಾರಿ ಯೋಜನೆಗೆ ಒಳಪಡುವ ಎಲ್ಲಾ ಕೆರೆಗಳನ್ನು ತುಂಬಿಸಲು ಸಾಧ್ಯವಿಲ್ಲ ಹಾಗಾಗಿ ಹೆಚ್ಚುವರಿ 1 ಟಿ.ಎಂ.ಸಿ ನೀರಿನ ಅವಶ್ಯಕತೆಯಿದ್ದು ಹೆಚ್ಚುವರಿ 1 ಟಿ.ಎಂ.ಸಿ ನೀರನ್ನು ಹರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಕ್ಷೇತ್ರದ ಜನರಿಂದ ಲಂಚ ಪಡೆದಿರುವುದು ನನ್ನ ಗಮನಕ್ಕೆ ಬಂದರೆಅಂತಹ ಅಧಿಕಾರಿಗಳನ್ನು ಜನತಾದರ್ಶನಕಾರ್ಯಕ್ರಮದಲ್ಲಿ ಕರೆಸಿ ಜನರಿಂದ ಪಡೆದ ಲಂಚದ ಹಣವನ್ನು ಅವರಿಗೆ ವಾಪಸ್ ವಿತರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಜೆ.ಡಿ.ಎಸ್ ಹೆಬ್ಬೂರು ಹೋಬಳಿ ಅಧ್ಯಕ್ಷ ವೈ.ಟಿ.ನಾಗರಾಜು, ನಾರಯಣಪ್ಪ, ಪ್ರಕಾಶ್, ಶ್ರೀನಿವಾಸ್ ಹಾಗೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
