ವಿದ್ಯಾರ್ಥಿಗಳು ಧ್ಯೆಯ ಮತ್ತು ಗುರಿ ಹೋಂದಿದರೆ ಜೀವನದಲ್ಲಿ ಪ್ರತಿಯೋಂದು ಯಶಸ್ಸು ಕಾಣಬಹುದು

ಸಿರಿಗೆರೆ

          ವಿದ್ಯಾರ್ಥಿಗಳು ಧ್ಯೆಯ ಮತ್ತು ಗುರಿ ಹೋಂದಿದರೆ ಜೀವನದಲ್ಲಿ ಪ್ರತಿಯೋಂದು ಯಶಸ್ಸು ಕಾಣಬಹುದು ಎಂದು ಸಿರುಗುಪ್ಪ ಶಾಸಕ ಎಂ ಎಸ್ ಸೋಮಲಿಂಗಪ್ಪ ಹೆಳಿದರು ಶನಿವಾರ ಸಿರಿಗೇರಿ ಬಾಲಕರ ಪ್ರೌಢಶಾಲಾ ಅವರಣದಲ್ಲಿ ಪದವಿ ಪೂರ್ವ ಕಾಲೇಜ್ ವತಿಯಿಂದ ಹಮ್ಮಿಕೋಂಡಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು ವಿದ್ಯಾರ್ಥಿಗಳು ಸಿರಿಗೇರಿಯ ಪಿಯು ಕಾಲೇಜ್ ಅಂತಿಮ ಗೋಳಿಸಿದಂತೆ ನಿರಂತರವಾಗಿ ಮುನ್ನಡೆಸುವ ಜೋತೆಗೆ ಸರಕಾರಿ ಕಾಲೇಜ್‍ಗೆ ಬರುವ ಪ್ರತಿಯೋಂದು ಯೋಜನೆಗಳನ್ನು ಸದುಪಯೋಗ ಪಡಿಸಿಕೋಂಡು ಉತ್ತಮ ಶಿಕ್ಷಣ ಪಡೆದು ಕೋಳ್ಳಬೇಕು ಅದೇರೀತಿ ಕಾಲೇಜ್‍ನಲ್ಲಿ ಸದ್ಯ ಲಭ್ಯವಿರುವ ವಿಷಯಗಳು ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 42 ವಿದ್ಯಾರ್ಥಿಗಳು ಅಬ್ಯಾಸ ಪಡೆಯುತಿದ್ದು ಮುಂದಿನ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದರೆ ವಿಜ್ಞಾನ ವಿಭಾಗವನ್ನು ಮಂಜೂರು ಮಾಡುತ್ತನೆ ಎಂದು ಭರವಸೆ ನೀಡಿದರು.

           ನಂತರ ಕಾಲೇಜ್ ಪ್ರಾಂಶುಪಾಲ ವಿಶ್ವನಾಥ ಗೌಡ ಮಾತನಾಡಿ ಸ್ಥಳಿಯ ಮತ್ತು ಸುತ್ತಮುತ್ತಲಿನ ಗ್ರಾಮದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜ್‍ಗಳಿಗೆ ಕಳುಹಿಸದೆ ಸರಕಾರಿ ಕಾಲೇಜ್‍ಗಳಲ್ಲಿ ಪ್ರವೇಶ ಪಡಿಸಿ ಉತ್ತಮ ಗುಣಮಟ್ಟ ಹಾಗೂ ಪರಿಣಾಮಕಾರಿ ಬೋದನೆಯನ್ನು ಪಡೆದುಕೋಂಡು ಶೈಕ್ಷಣಿಕ ಅಭಿವೃದ್ದಿ ಹೋಂದಬೇಕು ಎಂದರು

           ಇದೆ ವೇಳೆ ಬಾಲಕರ ಪ್ರೌಢ ಶಾಲೆಯ ಮುಖ್ಯಗುರು ಕೆ ವೀರಪ್ಪರವರು ಶಾಲೆಯಲ್ಲಿ 8 ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕೆಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
            ಕಾಲೇಜ್ ವತಿಯಿಂದ ಶಾಸಕ ಸೋಮಲಿಂಗಪ್ಪ ಮತ್ತು ಮುಖ್ಯ ಗುರುಗಳು ಕೆ ವೀರಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೊಳ್ಳಿದ್ಯಾವಮ್ಮ ಪಾವಡಿನಾಯಕ, ಮಾಜಿ ಉಪಾಧ್ಯಕ್ಷ ಎಸ್‍ಎಂ ಅಡಿವೆಸ್ವಾಮಿ, ಎಪಿಎಂಸಿ ಸದಸ್ಯ ಮಲ್ಲನಗೌಡ,ಕೊಂಚಿಗೇರಿ ಗ್ರಾಪಂ ಅಧ್ಯಕ್ಷ ಬಸವರಾಜ ಗ್ರಾಪಂ ಸದಸ್ಯರಾದ ಶೇಖರ ದಾನಪ್ಪ, ಹಾವಿನಹಾಳ ಮಲ್ಲಿಕಾರ್ಜನ್, ಮುಖಂಡರಾದ ಗುಜಿರಿಮೌಲಸಾಬ್, ಬಸವನಗೌಡ, ಹೋನ್ನುರಪ್ಪ, ಹಾಗೂ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ವಿದ್ಯಾರ್ಥಿಗಳು ಇನ್ನಿತರರು ಇದ್ದರು, ಕಾರ್ಯಕ್ರಮ ಅಥಿತಿ ಉಪನ್ಯಾಸಕ ನೆನೆಕ್ಕಿ ಹೋನ್ನುರ ನಿರೂಪಿಸಿ ವಿರೇಶ ವಂದಿಸಿದರು.

Recent Articles

spot_img

Related Stories

Share via
Copy link