ಸಿರಿಗೇರಿ
ವಿಧ್ಯಾರ್ಥಿಗಳ ಉಜ್ವಲ ಭವಿಷ್ಯತ್ತಿಗಾಗಿ ವಿಶ್ವಾಸ ಕಿರಣ ಬೋಧನಾ ತರಗತಿ ಕಾರ್ಯಕ್ರಮ ಅತಿ ಮುಖ್ಯ ಪಾತ್ರವಹಿಸುತ್ತದೆ ಎಂದು ಸಿರುಗುಪ್ಪ ಕ್ಷೇತ್ರ ಸಮನ್ವಯ ಅಧಿಕಾರಿ ಚಾಗಪ್ಪ ತಿಳಿಸಿದರು. ಅವರು ಇಲ್ಲಿನ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸಿರಿಗೇರಿ ಹೋಬಳಿ ಮಟ್ಟದ ಸರಕಾರಿ ನಿಯೋಜಿತ ಎಸ್ಸಿ ಎಸ್ಟಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಏರ್ಪಡಿಸಿದ್ದ ವಿಶ್ವಾಸ ಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ತದ ನಂತರ ಅಧ್ಯಕ್ಷತೆವಹಿಸಿದ್ದ ಶಾಲಾ ಮುಖ್ಯಗುರು ಪರ್ವೇಜ್ ಅಹಮ್ಮದ್ ಮಾತನಾಡಿ ಕಠಿಣ ಪಠ್ಯಕ್ರಮದ ವಿಷಯದ ಬಗ್ಗೆ ಹೆಚ್ಚಿನ ಭೋದನೆ ನೀಡಿ ವಿಧ್ಯಾಭ್ಯಾಸದ ಗುಣ ಮಟ್ಟವನ್ನು ಹೆಚ್ಚಿಸುವುದು ಇದರ ಪ್ರಮುಖ ಗುರಿಯಾಗಿದೆ ಎಂದರು.
ಆ ನಂತರ ಎಂ.ಸೂಗೂರು ಶಾಲಾ ಮುಖ್ಯಗುರು ಶ್ರೀನಿವಾಸ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಬಾಲಕರ ಪ್ರೌಢ ಶಾಲೆಯ ಮುಖ್ಯಗುರು ಕೆ.ವೀರಪ್ಪ ಮಾತನಾಡಿ ರಜಾ ದಿನಗಳಲ್ಲಿ ವಿಧ್ಯಾರ್ಥಿಗಳು ವಿನಾಕಾರಣ ಸಮಯ ವ್ಯರ್ಥ ಮಾಡದೆ ವಿಶ್ವಾಸ ಕಿರಣ ಕಾರ್ಯಕ್ರಮದಡಿ ನಡೆಯುವ ಕಠಿಣ ವಿಷಯಗಳಾದ ವಿಜ್ಞಾನ, ಗಣಿತ, ಇಂಗ್ಲೀಷ್ ವಿಷಯಗಳನ್ನು ಆಸಕ್ತಿಯಿಂದ ಕಲಿತು ಉತ್ತಮ ಅಂಕ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಸಿಓ ಚನ್ನಬಸವನಗೌಡ, ಸಂಪನ್ಮೂಲ ಶಿಕ್ಷಕರಾದ ಪ್ರಭುಲಿಂಗನಗೌಡ, ಶಿವಲೀಲಾ, ಪ್ರಿಯದರ್ಶಿನಿ, ಕೃಷ್ಣಮೂರ್ತಿ ಸೇರಿದಂತೆ ಸಿರಿಗೇರಿ, ಎಂ.ಸೂಗೂರು, ಮುದ್ದಟನೂರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
