ಹಾವೇರಿ :
ಪರಿಸರ ವೇದಿಕೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಇಬ್ಬರು ಸಾಧಕಿಯರಾದ ಡಾ. ಪುಷ್ಪಾ ಶಲವಡಿಮಠ ಮತ್ತು ಶ್ರೀಮತಿ ರೇಣುಕಾ ಗುಡಿಮನಿ ಅವರುಗಳನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು. ಪರಿಸರ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಾಧುರಿ ದೇವಧರ ಮಾತನಾಡಿ ಬೇರೆಯವರಿಗಾಗಿ ಸಮಯವನ್ನು ವಿನಿಯೋಗ ಮಾಡುವುದು ಇಂದಿನ ಅಗತ್ಯವಾಗಿದ್ದು , ವಿಶೇಷವಾಗಿ ಮಹಿಳೆಯರು ನಿತ್ಯ ತಾಪತ್ರೆಯಗಳ ನಡುವೆ ಸಮಾಜದ ಒಳ್ಳೆಯ ಕೆಲಸಗಳಿಗೆ ಕೈಜೋಡಿಸ ಬೇಕು. ಸಮಯ ಪರಿಪಾಲನೆಯೇ ಸಾಧನೆಗೆ ದಾರಿ ಎಂದರು.
ಡಾ. ಪುಷ್ಪಾ ಶಲವಡಿಮಠ ಮಾತನಾಡಿ ಮಹಿಳೆಗೆ ಇಂದು ಸಾಕಷ್ಟು ಅವಕಾಶಗಳಿವೆ, ಜೊತೆಗೆ ಸವಾಲಗಳೂ ಇವೆ. ಸವಾಲುಗಳನ್ನು ಮೆಟ್ಟಿ ಸಾಧನೆಯನ್ನು ಮಾಡುವುದೇ ನಿಜವಾದ ಸವಾಲಾಗಿದೆ ಎಂದರು. ಶ್ರೀಮತಿ ರೇಣುಕಾ ಗುಡಿಮನಿ ಮಾತನಾಡಿದರು. ಶ್ರೀಮತಿಯರಾದ ಪರಿಮಳಾ ಜೈನ, ಲತಾ ಹಳಕೊಪ್ಪ, ಭಾರತಿ ಯಾವಗಲ್, ಸುರೇಖಾ ನೇರಳಿಕರ, ರಾಜೇಶ್ವರಿ ಸಾರಂಗಮಠ, ಅಕ್ಕಮಹಾದೇವಿ ಹಾನಗಲ್ಲ, ರೇಖಾ ಭೈರಕ್ಕನವರ, ಕುಮಾರಿ ವಿಜಯಲಕ್ಷ್ಮೀ ಮಾಳವಾಡ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
