ಶಿಕ್ಷಕರು ಜ್ಞಾನದಾಸೋಹಿಗಳಾಗಲು ಕರೆ

ಮಿಡಿಗೇಶಿ :

              ಶಿಕ್ಷಕರು ಎಲ್ಲ ವೃತ್ತಿಗಳ ನಿರ್ಮಾತೃಗಳು ,ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸತ್ಯಸಂಧತೆ,ತಾಳ್ಮೆ ,ವಿನಯ ,ಪ್ರಾಮಾಣಿಕತೆ ನಿಷ್ಟೆ ಮತ್ತಿತರ ಗುಣಗಳನ್ನು ಮೈಗೂಡಿಸುವ ಅತ್ಯತ್ತಮ ಸಾಮಥ್ರ್ಯ ಶಿಕ್ಷಕರಲ್ಲಿದೆ.ಶಿಕ್ಷಕರಲ್ಲಿದೆ.ಶಿಕ್ಷಕರು ತಮ್ಮಲ್ಲಿರುವ ಅಪೂರ್ವ ಜ್ಞಾನಭಂಡಾರವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮೂಲಕ ಜ್ಞಾನದಾಸೋಹಿಗಳಾಗಬೇಕು ಎಂದು ಮಿಡಿಗೇಶಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್.ಕರೆ ನೀಡಿದರು.
                ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.ಶಿಕ್ಷಕ ವೃತ್ತಿಯ ಘನತೆಯಿಂದ ರಾಷ್ಟ್ರಪತಿ ಹುದ್ದೆ ಒಲಿಸಿಕೊಂಡ ಅಪ್ರತಿಮ ಸಾಧಕರಾಗಿದ್ದಾರೆ.ಅವರ ಜನ್ಮದಿನವನ್ನು ಎಲ್ಲ ಶಿಕ್ಷಕರಿಗೆ ಅರ್ಪಿಸಿದ ತ್ಯಾಗಮಯಿಯಾಗಿದ್ದಾರೆ .                 ಪುರಾತನ ಕಾಲದಲ್ಲಿ ಶಿಕ್ಷಕರಿಗೆ ಪೂಜ್ಯನಿಯ ಸ್ಥಾನಮಾನವಿತ್ತು.ಗುರುಗಳು ಹೇಳಿದ ಮಾತನ್ನು ಕಾಯಾ ವಾಚಾ ಮನಸಾ ಪಾಲಿಸುವ ಮೂಲಕ ಸಧೃಢ ವ್ಯಕ್ತಿತ್ವ ನಿರ್ಮಾಣವಾಗುತ್ತಿತ್ತು.ಸಿಕ್ಷಕರಲ್ಲಿ ಅಪಾರ ಗೌರವವಿರಿಸಿಕೊಂಡ ಏಕಲವ್ಯ ಅಂಬೇಡ್ಕರ್ ,ಅಬ್ದುಲ್ ಕಲಾಂ ,ಕುವೆಂಪು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.ಶಿಕ್ಷಕರು ಸಮಾಜ ತಿದ್ದುವ ಕೆಲಸವನ್ನು ಮಾಡಬಲ್ಲ ಶಕ್ತಿಯುಳ್ಳವರು.sಸಾಮಾಜಿಕ ಪಿಡುಗುಗಳ ಮೂಲೋತ್ಫಾಟನೆಗೆ ಶ್ರಮಿಸುವ ಶಿಕ್ಷಕರ ಕಾರ್ಯ ಅಭಿನಂದನೀಯ ,ಶಿಕ್ಷಕರಿಗೆ ಸಮಾಜದಲ್ಲಿ ಅತ್ಯುನ್ನತವಾದ ಗೌರವ ಅವರಲ್ಲಿರುವ ಜ್ಞಾನದಿಂದ ಲಭಿಸುತ್ತದೆ.ಆದದ್ದರಿಂದ ಶಿಕ್ಷಕರಾದವರು ನಿರಂತರ ಕಲಿಕಾರ್ಥಿಯಾಗಿ ,ಕಲಿತ ಜ್ಞಾನವನ್ನು ವರ್ಗಾಯಿಸಬೇಕು.ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಿಸುತ್ತಾರೆ.ಆದುದ್ದರಿಂದ ಶಿಕ್ಷಕ ಅತ್ಯಂತ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.ಸಕರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ,ಅವರನ್ನು ಪ್ರತಿಭಾವಂತರನ್ನಾಗಿ ಮಾಡುವ ಹೊಣೆ ಶಿಕ್ಷಕರ ಮೇಲಿದೆ.ಮಾನವನ ಜೀವನ ಅಮೂಲ್ಯವಾದುದು,ತಂದೆ ತಾಯಿಗಳ ಆಸರೆಯಲ್ಲಿ ಬೆಳೆದ ಮಕ್ಕಳು ,ಅತಿಹೆಚ್ಚು ಬೆಳೆಯುವುದು ಶಾಲೆಯಲ್ಲಿ ಆದುದರಿಂದ ಸಧೃಡ ಮಾನವ ಸಂಪನ್ನೂಲನಿರ್ಮಿಸುವ ಸವಾಲು ಶಿಕ್ಷಕರ ಮುಂದಿದೆ.ಆದುದ್ದರಿಂದ ಎಲ್ಲಾಶಿಕ್ಷಕರು ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿ ಅವರ ಏಳ್ಗೆಗೆ ಕಾರಣಕರ್ತರಾಗಬೇಕೆಂದರು.
             ಉಪನ್ಯಾಸಕರಾದ ಮುನಿರಾಜು,ಸತೀಸ್ ಕುಮಾರ್,ನಟರಾಜ,ಲಕ್ಷ್ಮೀನಾರಯಣ,ಮಹಮ್ಮದ್ ರಹತ್ತುಲ್ಲಾ ಮಾತನಾಡಿದರು, ಭಾಗ್ಯಲಕ್ಷೀ ಸ್ವಾಗತಿಸಿ,ಮಮತ ಕಾರ್ಯಕ್ರಮ ನಿರೂಪಿಸಿ ಸುರೇಶ್ ವಂದಿಸಿದರು.
             ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್.ಮಾತನಾಡಿದರು.ಉಪನ್ಯಾಸಕರಾದ ಲಕ್ಷ್ಮೀನಾರಾಯಣ ,ಸುರೇಶ್ .ಸತೀಸ್‍ಕುಮಾರ್ ನಟರಾಜು,ಚಿತ್ರದಲ್ಲಿದ್ದಾರೆ.

Recent Articles

spot_img

Related Stories

Share via
Copy link