ಶಿಕ್ಷಣ ಸಚಿವರ ತವರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯೇ ಬದಲು ನಕಲಿ ಅಭ್ಯರ್ಥಿಗೆ ಮಾಸ್ಕ್ ವರದಾನವಾಗುತ್ತಿದೆ

ತಿಪಟೂರು :

ರಾಜ್ಯದಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆಯುತ್ತಿದ್ದು ಇಂದು ಕೊನೆಯ ದಿನವಾದ ಇಂದು ನಗರದ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯ ಬದಲಿಗೆ ಬೇರೆ ಅಭ್ಯರ್ಥಿಯು ಪರೀಕ್ಷೆ ಬರೆಯುತ್ತಿದ್ದ ಘಟನೆ ಜರುಗಿದೆ.

ಅಮೆರಿಕದ 1 ಸಾವಿರ ಥಿಯೇಟರ್ ಗಳಲ್ಲಿ ಕೆಜಿಎಫ್ 2 ಬಿಡುಗಡೆ; ಚಿತ್ರದ ಮೊದಲ ದಿನದ ಗಳಿಕೆಯೇ 250 ಕೋಟಿ?

ನಗರದ ಟ್ಯಾಗೂರ್ ಶಾಲೆಯಲ್ಲಿ ಖಾಸಗಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯುತ್ತಿದ್ದು ಇದರಲ್ಲಿ 220 ಸಿ.ಸಿ.ಪಿ.ಎಫ್ ಅಂದರೆ ಪ್ರಥಮಬಾರಿಗೆ ಬರೆಯುತ್ತಿದ್ದರೆ 12 ಜನ ಸಿ.ಸಿ.ಪಿ.ಆರ್ ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಈ ಪರೀಕ್ಷೆಯಲ್ಲಿ ಸಿ.ಸಿ.ಪಿ.ಎಫ್ 37 ಅಭ್ಯರ್ಥಿಗಳು ಹಾಗೂ ಸಿ.ಸಿ.ಪಿ.ಆರ್‌ನಲ್ಲಿ 4 ಅಭ್ಯರ್ಥಿಗಳು ಇಂದಿನ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಇಂದು ಮಂಜುನಾಥ್.A ಎನ್ನುವ ಅಭ್ಯರ್ಥಿಯ ಬದಲಿಗೆ ಮುರಳೀಧರ್ ಎನ್ನುವ ವ್ಯಕ್ತಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತೆರಳಿದ ಸಂದರ್ಭದಲ್ಲಿ ಇಲ್ಲ ಅಭ್ಯರ್ಥಿಯು ಬರೆಯುತ್ತಿದ್ದುದು ನಿಜ ಆದರೆ ಇಂದು ಬೆಳಗ್ಗೆ ಅನುಮಾನ ಬಂದ ತಕ್ಷಣವೇ ಮಾಸ್ಕ್ ತೆಗೆಸಿ ನೋಡಿದಾಗ ಅಭ್ಯರ್ಥಿಯು ಅಲ್ಲ ಎಂದು ತಿಳಿದ ತಕ್ಷಣ ಅವನಿಂದ ಅಪಾಲಜಿ ಬರೆಸಿಕೊಂಡು ಹೊರಗೆ ಕಳುಹಿಸಲಾಗಿದೆ ಎಂದು ಪರೀಕ್ಷಾ ಕೇಂದ್ರ ಮುಖ್ಯಸ್ಥರು ಶಿವಶಂಕರ್ ತಿಳಿಸಿದರು.

Recent Articles

spot_img

Related Stories

Share via
Copy link
Powered by Social Snap