ಶಿರೂರು ಶ್ರೀಗಳ ಸಾವು ಸಹಜ ..! ವೈದ್ಯರ ಕೈ ಸೇರಿದ ಎಸ್.ಎಫ್.ಎಲ್.ವರದಿ

ಉಡುಪಿ: 

      ಜುಲೈ 19ರಂದು ಶಿರೂರು ಶ್ರೀಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಶ್ರೀಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್ ವರದಿ ವೈದ್ಯರ ಕೈ ಸೇರಿದೆ. ಆದರೆ ಎಫ್.ಎಸ್.ಎಲ್ ವರದಿಯಲ್ಲೂ ಶೀರೂರು ಶ್ರೀ ಸಹಜ ಸಾವು ಎಂದು ಉಲ್ಲೇಖವಾಗಿದೆ ಎಂಬ ಅಂಶ ತಿಳಿದು ಬಂದಿದೆ.

      ಎಫ್‌ಎಸ್‌ಎಲ್‌ ವರದಿಯನ್ನು ಮಣಿಪಾಲದ ಆಸ್ಪತ್ರೆಯ ವೈದ್ಯರಿಗೆ ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸಲಿರುವ ವೈದ್ಯರು ಶ್ರೀಗಳ ಸಾವಿಗೆ ಕಾರಣ ಏನು ಎಂಬ ಅಂಶವನ್ನು ಅಂತಿಮ ವರದಿಯಲ್ಲಿ ಉಲ್ಲೇಖಿಸಿ ಪೊಲೀಸರಿಗೆ ನೀಡಲಿದ್ದಾರೆ.

      ಶ್ರೀಗಳ ಸಾವಿಗೆ ವಿಷಪ್ರಾಷನ ಕಾರಣವಲ್ಲ, ಯಕೃತ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂಬ ಅಂಶ ಮಂಗಳೂರಿನ ವಿಧಿವಿಜ್ಞಾನ ಕೇಂದ್ರದ ತಜ್ಞರು ನೀಡಿರುವ ವರದಿಯಲ್ಲಿದೆ ಎನ್ನಲಾಗಿದೆ.

      ಎಫ್.ಎಸ್.ಎಲ್ ವರದಿ ಬಂದ ಹಿನ್ನಲೆಯಲ್ಲಿ ಆಗಸ್ಟ್ 24, 25 ರಂದು ಶ್ರೀಗಳ ಆರಾಧನೆ ಕ್ರಿಯೆ ನಡೆಯಲಿದೆ. ಆರಾಧನೆ ಶೀರೂರು ಮೂಲಮಠದಲ್ಲಿ ಸೋದೆ ಮಠದ ನೇತೃತ್ವದಲ್ಲಿ ನಡೆಯಲಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap