ಬಳ್ಳಾರಿ:
ನಗರದ ಖ್ಯಾತ ವೈದ್ಯ ಡಾ.ಬಿ.ಕೆ.ಶ್ರೀನಿವಾಸ್ ಮೂರ್ತಿ ಅವರಿಗೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮೀಗಳವರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಸೋಮವಾರ ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ನಿಮಿತ್ತ ಶ್ರೀಕ್ಷೇತ್ರ ಮಂತ್ರಾಲಯದ ಗುರುರಾಯರ ಸನ್ನಿಧಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸ್ವಾಮೀಜಿ ಅವರು ವೈದ್ಯ ಡಾ.ಬಿ.ಕೆ.ಶ್ರೀನಿವಾಸ್ ಮೂರ್ತಿ ಅವರಿಗೆ ಪ್ರಶ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾಪೀಠದ ಮುಖ್ಯಸ್ಥರಾದ ರಾಜಾ ಗಿರಿಯಾಚಾರ್ಯ, ಡಾ.ವಿ.ಆರ್.ಪಂಚಮುಖಿ, ಐ.ಪಿ.ನರಸಿಂಹಮೂರ್ತಿ, ಡಾ.ಎಮ್.ವಾದಿರಾಜಾಚಾರ್ಯ ಸೇರಿದಂತೆ ವಿವಿಧ ಗರ್ಣಯರು, ಸಾವಿರಾರು ಭಕ್ತರು ಇತರರು ಉಪಸ್ಥಿತರಿದ್ದರು. ಇವರೊಂದಿಗೆ ಧಾರವಾಡ್ದ ಗೋವಿಂದ ವಿಠಲ್ರಾವ್ ನವಲಗುಂದ್, ತಿರುಪತಿಯ ವಿದ್ವಾಂಸ ಫ್ರೊ.ದೇವನಾಥನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿಯು, 1ಲಕ್ಷ ರೂ.ನಗದು, ಪ್ರಶಸ್ತಿ ಫಲಕ, ಶಾಲು, ರಾಯರ ಶೇಷವಸ್ತ್ರ, ರಜತ ಪರಿಕರಗಳು ಹಾಗೂ ಮುತ್ತಿನ ಹಾರವನ್ನು ಒಳಗೊಂಡಿದೆ.
![](https://prajapragathi.com/wp-content/uploads/2018/08/1-15.gif)