ಸಮಸ್ಯೆಗಳ ನಿವಾರಣೆಗೆ ಮಾರ್ಗೊಪಾಯ ಕಂಡುಕೊಳ್ಳಿ : ವಿರೇಶಾನಂದ ಸರಸ್ವತಿ ಸ್ವಾಮಿಜೀ

ಕೊರಟಗೆರೆ

ಕಷ್ಟ ಎಂಬುದು ವೇಷಮರೆಸಿಕೊಂಡು ನಮ್ಮ ಬದುಕಿನಲ್ಲಿ ಬರುವ ಯಶಸ್ಸು ಅದನ್ನು ನಮ್ಮ ವಿವೇಚನಾ ಶಕ್ತಿಯಿಂದ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು ಸಮಸ್ಯೆಗಳ ನಿವಾರಣೆಗೆ ಮಾರ್ಗೊಪಾಯ ಕಂಡುಕೊಳ್ಳಬೇಕು ಅದು ಸಾಧ್ಯವಾಗುವುದು ಸದೃಢದೇಹದೊಳಗಿನ ಆರೋಗ್ಯಕರ ಮನಸ್ಸಿನಿಂದ. ಇದನ್ನೇ ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ಎಂದು ಕರೆದರು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಸ್ರಮದ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮಿಜೀ ವಿದ್ಯಾರ್ಥಿಗಳಿಗೆ ಕರೆ ನೀಡಿದರು

ಅವರು ಕೊರಟಗೆರೆ ಸರ್ಕರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ರೋವರ್ಸ್ & ರೇಂಜರ್ಸ್ ಘಟಕ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು ಆರೋಗ್ಯಕರ ಮನಸ್ಸನ್ನು ಹೊಂದಲು ದೇಹವನ್ನು ದಂಡಿಸಬೇಕು ಈ ನಿಟ್ಟಿನಲ್ಲಿ ಯುವಸಮುದಾಯ ವ್ಯಾಯಾಮ ಮತ್ತು ಕಾಯಕದ ಮೂಲಕ ದೇಹವನ್ನು ಸದೃಡಗೊಳಿಸಿಕೊಂಡು ಪರಿಶುದ್ಧ ಮನಸ್ಸನ್ನು ಹೊಂದಬೇಕು ದಂಡನೆಗೆ ಒಳಪಟ್ಟ ದೇಹವು ಶಕ್ತಿಯ ಗಣಿಯಾಗುತ್ತದೆ ಶಕ್ತಿಯಿದ್ದಲ್ಲಿ ಮನಸ್ಸು ಜಾಗೃತಾವಸ್ಥೆಯಲ್ಲಿರುತ್ತದೆ. ಇಂತಹ ಶ್ರಮ ಸಂಸ್ಕøತಿ ಮೂಲದ ಆರೋಗ್ಯಕರ ಮನಸ್ಸೇ ಸಕಾರಾತ್ಮಕ ಗುರಿ ತಲುಪುವುದಕ್ಕೆ ಪ್ರಮುಖ ಸಾಧನವಾಗುತ್ತದೆ. ಈ ಪರಿಪಕ್ವ ಮನಸ್ಸಿನಿಂದ ಇಂದಿನ ಯುವಕರು ಶಿಕ್ಷಣದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ರೂಡಿಸಿಕೊಳ್ಳಬೇಕು
ನಮ್ಮ ದೇಶಕ್ಕೆ ತನ್ನದೇ ಆದ ಶ್ರೀಮಂತ ಇತಹಾಸವಿದೆ ಆದರ್ಶ ಪರಂಪರ ಇದೆ ಹಾಗೂ ಪರಿಪಕ್ವ ಜ್ಞಾನ ಭಂಢಾರವಿದೆ ದುರಾದೃಷ್ಟವಶಾತ್ ನಮ್ಮ ದೇಶದ ಇತಿಹಾಸವನ್ನು ನಮ್ಮವರು ಬರೆಯದೆ ಹೊದದ್ದು, ಅದನ್ನು ವಿದೇಶಿ ಏಜೆಂಟರು ಬರೆದ ಪರಿಣಾಮವಾಗಿ ಗತಕಾಲದ ಸತ್ಯ ಸುಳ್ಳಿನ ಕಂತೆಯಲ್ಲಿ ಮರೆಮಾಚಲ್ಪಟ್ಟಿದೆ ಇದು ದುರಂತ ಸಂಗತಿ.

ಒಂದು ದೇಶದ ತಾಕತ್ತು ಆದು ಅಳವಡಿಸಿಕೊಂಡಿರುವ ಶಿಕ್ಷಣ ಪದ್ಧತಿಯಲ್ಲಿರುತ್ತದೆ ಆದರೆ ನಮ್ಮ ಹಿಂದಿನ ಶಿಕ್ಷಣವು ವಿದೆಶಿಯರು ರೂಪಿತಗೊಂಡು ನಮ್ಮ ನಿಜವಾದ ಸಂಸ್ಕøತಿ ಜೀವನ ಮೌಲ್ಯಗಳನನು ತಿಳಿಯಲು ಅವಕಾಶವಿಲ್ಲದಂತಾಗಿದೆ ನಮ್ಮಲ್ಲಿ ಆಗಾಧವಾದ ಜ್ಞಾನ ಸಂಪತ್ತು ಇದೆ ನಮ್ಮ ದೇಶಕ್ಕಾಗಿ ಇದೆ ಜ್ಞಾನ ಸಂಪತ್ತು ವಿನಿಯೋಗವಾಗಿದೆ ಆದರೆ ಇದಾವುದು ಇಂದಿನ ಶಿಕ್ಷಣ ಪದ್ದತಿಯಲ್ಲಿ ಅಳವಡಿಕೆಯಾಗಿಲ್ಲ ಈ ನಿಟ್ಟಿನಲ್ಲಿ ನಮಗೆ ಬದುಕಿಗೆ ಪೂರಕವಾದ ಪ್ರೀತಿಯನ್ನು ಕಲಿಸುವ ಶಿಕ್ಷಣ ರೂಪಿತಗೊಳ್ಳಬೇಕಾಗಿದೆ ಎಂದರು

ಸಾಹಿತಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ. ಓನಾಗರಾಜು ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ಆಶಯಗಳಿಗೆ ಹಿಂಬುಕೊಡುವಂತಿವೆ ಆದರೆ ಅವು ಸಾಂಸ್ಥಿಕ ರೂಪ ಪಡೆದುಕೊಳ್ಳುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ವಿವೇಕನಂದರು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ನಮ್ಮ ದೇಶದ ಸಮಗ್ರತೆಗಾಗಿ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದವರು ಅವರ ಸಮಾಜಮುಖಿಯಾದ ಚಿಂತನೆಗಳು ಇಂದಿನ ರಾಜಕೀಯ ಶೈಕ್ಷಣಿಕ, ಸಾಮಾಜಿಕ ಆರ್ಥಿಕ ರಂಗಗಳ ಸುಧಾರಣೆಗೆ ಪೂರಕವಾಗಿದೆ. ಅವರು ಧರ್ಮದ ಬಗ್ಗೆ ಚಿಂತಿಸಿದ್ದಕ್ಕಿಂತ ಮಾನವತ್ವದ ಬಗ್ಗೆ ಆಲೋಚಿಸಿದ್ದೇ ಹೆಚ್ಚು ಅವರು ಹತ್ತು ಹಲವಾರು ಮತಧರ್ಮ ಪಂಗಡಗಳ ಸಮುಚ್ಛಯವಾದ ಭಾರತದಲ್ಲಿನ ಜನರನ್ನು ಆಧ್ಯಾತ್ಮದ ಎಳೆಯಲ್ಲಿ ಒಗ್ಗೂಡಿಸಲು ಯತ್ನಿಸಿದರು ದೇವರು ಧರ್ಮ ಗುಡಿಗಳಿಗೆ ಆಧ್ಯತೆ ನೀಡದೆ ಮಾನವೀಯತೆಯ ತಳಹದಿಯಲ್ಲಿ ಆಧ್ಯಾತ್ಮವನ್ನು ತಿಳಿಸಿಕೊಡಲು ಯತ್ನಿಸಿದರು ಈ ಸಂಬಂಧ ಯುವಸಮುದಾಯವನ್ನು ಜಾಗೃತಿಗೊಳಿಸಿದರು. ಹಿಗಾಗಿ ಇವರ ಜೀವಮುಖಿಯಾದ ಚಿಂತನೆಗಳು ನಮ್ಮ ಯುವಜನಕ್ಕೆ ಸ್ಪೂರ್ತಿಯಾಗಿ ನಿಲ್ಲಬೇಕು ಒಂದರ್ಥದಲ್ಲಿ ವಿವೇಕಾನಂದರ ಧಾರ್ಮಿಕ ನೆಲೆಗಟ್ಟಿನ ತತ್ವದರ್ಶಗಳೆ ಬ್ರಾತೃತ್ವ ಮೂಡಿಸುತ್ತವೆ ಎಂದರು.

ಪ್ರಾಂಶುಪಾಲರಾದ ಡಾ. ಬಾಲಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ತಂದೆ ತಾಯಿಗಳಿಗೆ ಗುರುಹಿರಿಯರಿಗೆ ವಿನಯ ವಿದೇಯತೆಯನ್ನು ತೋರುವುದೇ ನಿಜವಾದ ಸದ್ಬಾವನೆ ಅದನ್ನು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇಂತಹ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಡಾ. ಡಿ. ಶಿವನಂಜಯ್ಯ, ಅನ್ವರ್‍ಬಾಷ, ತಿರುಮಲೇಶ್‍ಬಾಬು, ಅನುಪಮ, ಶಿವರಾಜು ವೆಂಕಟೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸ್ಕೌಟ್ಸ್ & ಗೈಡ್ಸ್‍ನ ಸಂಚಾಲಕರಾದ ಡಾ. ತಿಪ್ಪೇಸ್ವಾಮಿ ಸ್ವಾಗತಿಸಿ ರೋವರ್ಸ್ & ರೇಂಜರ್ಸ್ ಘಟಕದ ಸಂಚಾಳಕರಾದ ಪ್ರೊ. ಸರಸ ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link