ಬಳ್ಳಾರಿ ಜಿಲ್ಲಾ ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಖಾಸಗಿ ಸುದ್ದಿವಾಹಿನಿಯ ಸುದ್ದಿ ಚಿತ್ರ ಛಾಯಾಚಿತ್ರಗ್ರಾಹಕ ದುರ್ಗೇಶ್ ದಿನಾಂಕ 3-9-2018 ರಂದು ನಗರದಲ್ಲಿ ನೆಡೆದ ಆಟೋ ಮತ್ತು ಬೇರೊಂದು ವಾಹನದ ಮಧ್ಯೆ ಅಪಘಾತ ಸಂಭವಿಸಿ ಡಿಕ್ಕಿ ಹೊಡಿದ ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ಮದ್ಯೆ ನರಳುತ್ತಿದ್ದ ವ್ಯಕ್ತಿಯನ್ನು ನೋಡಿದ ಸುದ್ದಿ ಚಿತ್ರ ಛಾಯಾಚಿತ್ರಗ್ರಾಹಕ ದುರ್ಗೇಶ್ ಕರ್ತವ್ಯ ನಿರತನಾಗಿ ಹೊರಟ ಸಂಧರ್ಭದಲ್ಲಿ ತಕ್ಷಣವೇ ಘಟನೆಯನ್ನು ಕಂಡು ಕೊಡಲೇ ಇಂದು ಮುಂದು ನೋಡದೆ ಅಪಘಾತಕ್ಕೀಡಾದ ಹುಸೇನ್ ಸಂಗನಕಲ್ಲು ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಓರ್ವವ್ಯಕ್ತಿಯ ಜೀವ ಉಳಿಸುವಲ್ಲಿ ಶ್ರಮಿಸಿದ ದುರ್ಗೇಶ್ಗೆ ಬಳ್ಳಾರಿ ಜಿಲ್ಲಾ ವಿಜಯನಗರ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ.
ಉತ್ತಮ ಸಮಾಜಿಕ ಕಾರ್ಯಮಾಡಿ ಇಡೀ ಎಲ್ಲಾ ಛಾಯಾಚಿತ್ರ ಗ್ರಾಹಕರಿಗೆ
ಮತ್ತು ವೀಡಿಯೋಗ್ರಾಫರ್ ಗಳಿಗೆ ಮಾದರಿಯಾಗಿರುವ ಇವರಿಗೆ ಇಂದು ಸಂಘದ ಕಛೇರಿಯಲ್ಲಿ ನೆಡೆದ ಸರಳ ಸಮಾರಂಭದಲ್ಲಿ ಉತ್ತಮ ಸಮಾಜ ಸೇವಕ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಎ.ಜನಾರ್ಧನ,ಉಪಾಧ್ಯಕ್ಷ ಜಿ.ಸಿ.ಅಶೋಕ್,ಕಾರ್ಯದರ್ಶಿ ವಿಶ್ವನಾಥಶಾಸ್ತ್ರಿ,
ಪುರುಷೋತ್ತಮ,ರಾಮು,ಜೇಮ್ಸ್,ಆನಂದ್ ಮಲ್ಲಿಕಾರ್ಜುನ ಗೌರವ ಅಧ್ಯಕ್ಷ ಬಿ.ಎಂ.ಸಿದ್ದಲಿಂಗಸ್ವಾಮಿ ಹಾಗು ಜಿಲ್ಲೆಯ ಎಲ್ಲಾ ಛಾಯಾಚಿತ್ರಗ್ರಾಹಕರು ಸಂತೋಷ ವ್ಯಕ್ತಪಡಿಸಿದ್ದಾರೆ