‘ಸಾಮರಸ್ಯ ಇಂದಿನ ಅನಿವಾರ್ಯತೆ’

ತುಮಕೂರು:

             ಸದ್ಭಾವನೆ ಮತ್ತು ಸಾಮರಸ್ಯ ಇಂದಿನ ಸಮಾಜದ ಅನಿವಾರ್ಯತೆ ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಕೆ. ರಾಮಚಂದ್ರಪ್ಪ ತಿಳಿಸಿದರು.

               ಕಲಾ ಕಾಲೇಜಿನ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ ದಿನಾಚರಣೆಯ ಸಂದರ್ಭ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

               ಭಾರತ ವೈವಿಧ್ಯತೆಯಲ್ಲಿ ಏಕತೆಇರುವ ದೇಶ. ಆದರೆ ವಿವಿಧ ಕಾರಣಗಳಿಗಾಗಿ ಈ ಏಕತೆಗೆ ಧಕ್ಕೆ ಬರುತ್ತಿದೆ.ಯುವಜನತೆ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಪ್ರಯತ್ನಿಸಬೇಕುಎಂದರು.

                ಇದೇ ಸಂದರ್ಭಎನ್. ಎಸ್. ಎಸ್. ಸ್ವಯಂಸೇವಕರು ಪ್ರವಾಹ ಸಂತ್ರಸ್ತರಿಗಾಗಿ ಪರಿಹಾರಧನವನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಕರಿಯಣ್ಣ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.

Recent Articles

spot_img

Related Stories

Share via
Copy link