ಗುತ್ತಲ :
ಗುತ್ತಲ ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳ ಕುರಿತು ಜಾಗೃತಿ ವಹಿಸುವುದು ಹಾಗೂ ಪಟ್ಟಣದ ಶಿವಯೋಗಿಶ್ವರ ವೃತ್ತದಲ್ಲಿ ಮುಂಜಾಗೃತ ಕ್ರಮವಾಗಿ ಸಿಸಿ ಕ್ಯಾಮಾರಾ ಅಳವಡಿಸಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಗುತ್ತಲ ಪಿಎಸ್ಐ ಸಿದ್ಧಾರೂಡ ಬಡಿಗೇರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಅಕುಡಕರ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಪಟ್ಟಣವು ಬೆಳೆಯುತ್ತಿದ್ದು, ರಾತ್ರಿ ಸಮಯದಲ್ಲಿ ಪಟ್ಟಣದ ಕೇಲ ಹೊರವಲಯದಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಗಸ್ತು ನಡೆಸುವುದು ಅವಶ್ಯವಾಗಿದೆ. ಪಟ್ಟಣದಲ್ಲಿ ಶಿವಯೋಗಿಶ್ವರ ವೃತ್ತದಲ್ಲಿ ಹಾಗೂ ಅನೇಕ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮಾರಾ ಅಳವಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮಕೈಗೊಳ್ಳುಬೇಕು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ ಮುದಿಗೌಡ್ರ, ಯಶವಂತಗೌಡ್ರ, ಗೋಪಾಲ ಪಾರ್ಗೆ, ಹಾಲೇಶ ಹಾಲಣ್ಣನವರ, ಶಿವಣ್ಣ ಬೆನ್ನೂರ, ಚನ್ನಪ್ಪ ಹೊನ್ನಮ್ಮನವರ, ದಾದಾಪೀರ ಖಾಲೆಖಾನವರ, ರೇಹಾನ್ ಮುಜಾವರ, ಗೌಸಸಾಕ್ ಬಲೇಬಾಯಿ, ಶಿವಯೋಗೆಪ್ಪ ನಾಲ್ವತೋಡದ, ಕರಬಸು ಕುರಬಗೇರಿ, ಸುನೀಲ ಬೆಂದ್ರೆ, ದಾದಾಪೀರ ಹೊಸಮನಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರುಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
