ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬ್ಯಾಡಗಿ:

            ‘ರಕ್ತ’ ತಯಾರಿಸಲಾಗದ ವಸ್ತು, ಇದರಲ್ಲಿ ವ್ಯಕ್ತಿಯೊಬ್ಬನಜೀವ ಉಳಿಸುವಂತಹ ಶಕ್ತಿ ಅಡಗಿದ್ದು ಸಾವನ್ನೇಗೆಲ್ಲುವಂತಹ ದಿವ್ಯೌಷಧಿ ನಮ್ಮದೇಹದಲ್ಲೇ ಲಭ್ಯವಿದೆ, ಆದ್ದರಿಂದ ‘ರಕ್ತದಾನ’ ಶಿಬಿರಗಳಲ್ಲಿ ಯುವಜನಾಂಗ ಹೆಚ್ಚಾಗಿ ಯಾವುದೇ ಅಳುಕಿಲ್ಲದೇ ಪಾಲ್ಗೊಳ್ಳುವಂತೆ ತಹಶೀಲ್ದಾರ ಜಯಣ್ಣ ತಳವಾರ ಬಸವರಾಜಛತ್ರದಕರೆ ನೀಡಿದರು.
             ಸ್ಥಳೀಯ ಸರಕಾರಿ ಪ್ರಥಮದರ್ಜೆಕಾಲೇಜು ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.
‘ರಕ್ತ’ ವೆಂಬ ವಸ್ತುವೇ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ, ಆರೋಗ್ಯವಂತಯುವಕರರಕ್ತವು ಬಹಳಷ್ಟು ಜನರಿಗೆಉಪಕಾರಿಯಾಗಲಿದೆ, ಇತ್ತೀಚಿನ ದಿನಗಳಲ್ಲಿ ದುಶ್ಚಟಗಳ ದಾಸರಾಗುತ್ತಿರುವಯುವಕರು ವಿವಿಧ ರೋಗಗಳು ಅಂಟಿ ಕೊಂಡುಅನಾರೋಗ್ಯ ಪೀಡಿತರಾಗುತ್ತಿದ್ದಾರೆ, ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಬೇಕಾಗಿದ್ದರಕ್ತವು ವೃಥಾ ವ್ಯರ್ಥವಾಗುತ್ತಿದೆಎಂದರು.
             ದೇವರ ಸಮಾನ:ತಾಲೂಕಾ ವೈದ್ಯಾಧಿಕಾರಿಡಾ.ಪುಟ್ಟರಾಜ ಮಾತಮಾಡಿ, ರಕ್ತದಾನದಿಂದಕೊಟ್ಟಂತಹರಕ್ತ ಬೇರೊಬ್ಬರಜೀವರಕ್ಷಿಸಲಿದೆ ಹೀಗಾಗಿ ರಕ್ತ ನೀಡುವ ದಾನಿಗಳನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತಿದೆ, ಆರೋಗ್ಯವಂತ ಮನುಷ್ಯ ವರ್ಷಕ್ಕೆರಡು ಬಾರಿಯಾದರೂರಕ್ತದಾನ ಮಾಡಲು ಮುಂದಾಗುವುದು ಸೂಕ್ತ ಎಂದರು.
               ಯುವ ಶಕ್ತಿ ಸದ್ಭಳಕೆಯಾಗಲಿ:ಪರಶುರಾಮ ಮೇಲಗಿರಿ ಮಾತನಾಡಿ, ಕ್ರೀಯಾಶೀಲ ಯುವಕರಿಂದ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಥ್ರ್ಯವಿದೆ, ಆದರೆಇತ್ತೀಚೆಗೆ ದುಶ್ಚಟಗಳ ದಾಸರಾಗುತ್ತಿರುವಯುವಕರದೇಹದಲ್ಲಿ ಹೊಸರಕ್ತದಉತ್ಪಾದನೆಯಾಗದೇ ರೋಗಿಗಳಿಗೆ ಉಪಯೋಗಕ್ಕೆ ಬರದಂತಾಗಿರುವುದುದುರದೃಷ್ಟಕರ ಹೀಗಾಗಿ ದೇಶದೆಲ್ಲೆಡೆರಕ್ತದ ದಾನಿಗಳ ಅನ್ವೇಷಣೆ ನಿರಂತರವಾಗಿ ನಡೆಯುತ್ತಿದೆಎಂದರು.
               ವೇದಿಕೆಯಲ್ಲಿರೋಟರಿ ಸಂಸ್ಥೆಯ ಎಸ್.ಎಸ್.ಶೆಟ್ಟರ್, ಉಪಾಧ್ಯಕ್ಷ ಶಿವರಾಜ ಚೂರಿ, ಮಂಜುನಾಥಉಪ್ಪಾರ, ಮಾಲತೇಶಉಪ್ಪಾರ, ಬಸವರಾಜ ಸುಂಕಾಪುರ, ಡಾ.ನಿಡಗುಂದಿ, ಪ್ರಾಚಾರ್ಯ ಸುರೇಶಗ್ರಂಥಪಾಲಕ ನಿಂಗಪ್ಪಅರಬಗೊಂಡಸೇರಿದಂತೆಇನ್ನಿತರರುಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link