ಹುಳಿಯಾರು
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿಶ್ವಾಸ ನಿರ್ಣಯಕ್ಕೆ ಅಗತ್ಯ ಸದಸ್ಯರ ಕೋರಂ ವ್ಯಕ್ತವಾದ ಕಾರಣ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲಾಯಿತು.
ಹಾಲಿ ಅಧ್ಯಕ್ಷೆ ಮಂಜುಳಾ ಅವರ ಕಾರ್ಯವೈಖರಿಗೆ ಬೇಸತ್ತು ಒಟ್ಟು 20 ಸದಸ್ಯರ ಪೈಕಿ 15 ಮಂದಿ ಪದಚ್ಯುತಿಗೊಳಿಸುವಂತೆ ಉಪವಿಭಾಗಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಉಪವಿಭಾಗಾಧಿಕಾರಿ ಎನ್.ಆರ್.ಉಮೇಶ್ಚಂದ್ರ ಅವರ ಸಮ್ಮುಖದಲ್ಲಿ ನಿರ್ಣಯದ ಸಭೆ ನಡೆಯಿತು.
ನಿರ್ಣಯದಲ್ಲಿ 15 ಮಂದಿ ಭಾಗವಹಿಸಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸುವಂತೆ ಮತ ನೀಡಿದರು. ಉಪವಿಭಾಗಾಧಿಕಾರಿ ಕಾರ್ಯಾಲಯದ ರುದ್ರೇಶ್, ಪ್ರಭಾರ ಉಪ ತಹಸೀಲ್ದಾರ್ ಎಚ್.ಮಂಜುನಾಥ್, ಗ್ರಾಮಲೆಕ್ಕಿಗ ಲಕ್ಷ್ಮಿಪತಿ, ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ನಾಗೇಶ್ ಹಾಜರಿದ್ದರು
