ಕಿಸಾನ್ ಸಮ್ಮಾನ್ ನಿಧಿ : ರೈತರಿಗೆ ಖಾತೆಗೆ ಈ ಬಾರಿ 4,000 ರೂ

ತುಮಕೂರು:

     ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ  14ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ.ವರ್ಷದಲ್ಲಿ ಮೂರು ಬಾರಿ 2,000 ರೂ. ಗಳಂತೆ ಒಟ್ಟು 6,000 ರೂ. ಗಳನ್ನು ಈ ಯೋಜನೆಯಡಿ ರೈತರು ತಂತಮ್ಮ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸುತ್ತಾರೆ.

     ಸಾಮಾನ್ಯವಾಗಿ ಪ್ರತಿ ಕಂತಿನಲ್ಲೂ ರೈತರು ತಲಾ 2,000 ರೂ.ಗಳನ್ನು ಸ್ವೀಕರಿಸುತ್ತಾರೆ. ಆದರೆ 13ನೇ ಕಂತಿನ ಪಾವತಿ ವೇಳೆ ತಮ್ಮ ಪಾಲಿನ 2,000 ರೂ.ಗಳನ್ನು ಸ್ವೀಕರಿಸಲು ವಿಫಲರಾದ ರೈತರಿಗೆ ಈ ಬಾರಿ ಒಟ್ಟು 4,000 ರೂ.ಗಳು ಖಾತೆಗೆ ಬಂದು ಬೀಳಲಿದೆ.

     ತಂತಮ್ಮ ಗುರುತಿನ ಖಾತ್ರಿ ಮಾಡಲು ವಿಫಲರಾದ ಅನೇಕ ರೈತರಿಗೆ ಕಳೆದ ಕಂತಿನ ಪಾವತಿ ಮಾಡಲಾಗಿಲ್ಲ. ಆದರೆ ಈ ಬಾರಿ ತಮ್ಮ ಗುರುತುಗಳನ್ನು ದೃಢೀಕರಿಸಿದ ರೈತರಿಗೆ ಕಳೆದ ಬಾರಿಯ ಮೊತ್ತವೂ ಸೇರಿ ಒಟ್ಟಾರೆ 4,000 ರೂ.ಗಳು ಖಾತೆಗೆ ಜಮೆಯಾಗಲಿದೆ.ಪಿಎಂ ಕಿಸಾನ್ ಜಾಲತಾಣದಲ್ಲಿ ಫಲಾನುಭವಿ ರೈತರು ತಂತಮ್ಮ ಹೆಸರುಗಳನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap