ಜಾರ್ಖಂಡ್:
ಚಾಲಕನೋರ್ವ ಕಾರು ಚಲಾಯಿಸುತ್ತಿದ್ದ
ಸಂದರ್ಭದಲ್ಲಿ ಸೆಲ್ಸಿ ತೆಗೆದುಕೊಳ್ಳಲು ಯತ್ನಿಸಿದ
ವೇಳೆ ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ
ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ
ಐದು ಜನ ಮೃತಪಟ್ಟ ದಾರುಣ ಘಟನೆ
ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆ ಜಾರ್ಖಂಡ್ ರಾಜ್ಯದ
ದಿಯೋಘರ್ನ ಸಿಕಾತಿಯಾ ಬ್ಯಾರೆಜ್ನಲ್ಲಿರುವ
ಸೇತುವೆಯಲ್ಲಿ ಸಂಭವಿಸಿದೆ ಎಂದು
ವರದಿಯಿಂದ ತಿಳಿದುಬಂದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ
ನೆರವಿನಿಂದ ಕಾರನ್ನು ನದಿಯಿಂದ ಹೊರಗೆ
ತೆಗೆದಿದ್ದಾರೆ ಎನ್ನಲಾಗಿದೆ.ಇನ್ನು ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ
ದಿಯೋಘರ್ ಸದಾರ್ ಆಸ್ಪತ್ರೆಗೆ ಸ್ಥಳಾಂತರ
ಮಾಡಲಾಗಿದೆ ಎಂದು ವರದಿಯಾಗಿದೆ.
![](https://prajapragathi.com/wp-content/uploads/2023/05/accident.jpg)