ಹಾಸನ:
ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿ ಸಂಚಾರಕ್ಕೆ ತೊಂದರೆ ಆಗಿದ್ದರಿಂದ ಬಂದ್ ಮಾಡಲಾಗಿದ್ದ ಶಿರಾಡಿ ಘಾಟ್ (ಹಾಸನ–ಮಂಗಳೂರು) ರಸ್ತೆಯಲ್ಲಿ ಸಂಜೆ 6ರ ತನಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ದೋಣಿಗಾಲ್ ಚೆಕ್ಪೋಸ್ಟ್ನಿಂದ ಸಂಜೆ 6ರ ನಂತರ ವಾಹನ ಸಂಚಾರ ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಟ್ರೋಲ್ ರೂಂ ನಿಂದ ಆಗಲೇ ಶಿರಾಡಿ ಘಾಟಿಯಲ್ಲಿ ಸಂಚಾರ ಅಲ್ಪಕಾಲದ ಮಟ್ಟಿಗೆ ತಡೆಹಿಡಿಯಬೇಕು ಎನ್ನುವ ಆದೇಶ ಬಂದಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಚಾರ ಮುಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/shiradi-ghatt-1.gif)