ಮಧುಗಿರಿ :
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ- ರತ್ನಾಗಿರಿ ಗ್ರಾಮದ ಗಡಿ ರಸ್ತೆಯಲ್ಲಿ ರೆನಾಲ್ಟ್ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಗಳೂರಿನಿಂದ ನಾಗೇಂದ್ರ ಮತ್ತು ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಗೌರಿ ಗಣೇಶ ಹಬ್ಬಕ್ಕೆಂದು ಆಂಧ್ರದ ದ್ಯಾವಗೊಂಡನಹಳ್ಳಿಗೆ ತೆರಳುತ್ತಿದ್ದಾಗ ಭಾನುವಾರ ಬೆಳಗಿನ ಜಾವ ಸುಮಾರು 5:00 ಘಂಟೆ ಸಮಯದಲ್ಲಿ ಹೊಸಕೆರೆ ಗ್ರಾಮದ ಹೊರ ಪ್ರದೇಶದಲ್ಲಿ ರೆನಾಲ್ಟ್ ಕಾರಿನ ಇಂಜಿನ್ ಸಮೀಪ ಬೆಂಕಿ ಕಾಣಿಸಿ ಕೊಂಡಿದ್ದು ಕಾರಿನಲ್ಲಿ ಇದ್ದಾ ನಾಲ್ವರು ಅವಘಡದಿಂದ ಪಾರಾಗಿದ್ದಾರೆ.
ನಂತರ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಮಿಡಿಗೇಶಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ