‘ತೇಜಸ್’ ಯುದ್ಧ ವಿಮಾನದಲ್ಲಿ ಸಚಿವ ರಾಜನಾಥ್ ಸಿಂಗ್ ಹಾರಾಟ!

ಬೆಂಗಳೂರು:

      ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಇಂದು ಹಾರಾಟ ನಡೆಸಿದ್ದಾರೆ.

      ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಲಘು ಯುದ್ಧ ವಿಮಾನ ತೇಜಸ್‌ ನಲ್ಲಿ ಹಾರಾಟ ನಡೆಸಲಿದ್ದಾರೆ. ಬೆಂಗಳೂರಿನ ಹೆಚ್‌ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ರಾಜನಾಥ್‌ ಸಿಂಗ್‌ ತೇಜಸ್‌ ನಲ್ಲಿ ಹಾರಾಟ ನಡೆಸಿದ್ದಾರೆ.

     ಈ ತೇಜಸ್ ಲಘು ಯುದ್ಧ ವಿಮಾನವನ್ನು ಬೆಂಗಳೂರಿನ ಎಚ್‍ಎಎಲ್‍ನಲ್ಲಿ ನಿರ್ಮಿಸಲಾಗಿದೆ. 13 ಟನ್ ತೂಕದ ಈ ಅತ್ಯಾಧುನಿಕ ಪೈಟರ್ ಜೆಟ್ ಮೂರು ಟನ್ ತೂಕದ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಬಾಂಬ್‍ಗಳನ್ನು ಕೊಂಡೊಯ್ಯುವ ಸಾಮಥ್ರ್ಯವಿದೆ. ಗಂಟೆಗೆ 1,350 ಕಿ.ಮೀ ವೇಗದಲ್ಲಿ ಮುನ್ನುಗ್ಗುವ ತೇಜಸ್ 500 ಬಾಂಬ್‍ಗಳನ್ನು ವೈರಿ ನೆಲೆಗಳ ಮೇಲೆ ಉಡಾಯಿಸುವ ಶಕ್ತಿ ಹೊಂದಿದೆ. ಈ ವಿಮಾನದಲ್ಲಿರುವ 73 ಕ್ಷಿಪಣಿಗಳು ಅಲ್ಪ ಅಂತರದ ಗುರಿಯನ್ನು ನಿಖರವಾಗಿ ತಲುಪಬಲ್ಲವು. 

       ಇದೇ ಮೊದಲ ಬಾರಿಗೆ ರಕ್ಷಣಾ ಸಚಿವರೊಬ್ಬರು ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.  ಈ ಮೂಲಕ ರಾಜನಾಥ್‌ ಸಿಂಗ್‌ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿರುವ ದೇಶದ ಮೊದಲ ರಕ್ಷಣಾ ಮಂತ್ರಿ ಎಂಬ ಗರಿಮೆಗೂ ಪಾತ್ರವಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link