ಅಯೋಧ್ಯೆ ತೀರ್ಪು ಏನೆ ಆದರು ಸಂಯಮದಿಂದ ಇರಿ : ಮಾಯಾವತಿ

ನವದೆಹಲಿ:

     ಅಯೋಧ್ಯೆ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಏನೆ ತೀರ್ಪು ನೀಡಿದರು ಎಲ್ಲರೂ ಅದನ್ನು ಗೌರವಿಸಬೇಕು ಎಂದು ಬಿಎಸ್ ಪಿ ವರಿಷ್ಠೆ ಮಾಯಾವತಿ ನುಡಿದಿದ್ದಾರೆ.

     ಟ್ವೀಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ದಿನಂಪ್ರತಿ ವಿಚಾರಣೆ ನಡೆಸುತ್ತಿದೆ ಮತ್ತು ನ್ಯಾಯಾಲಯ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಿ ದೇಶದ ಕೋಮು ಸೌಹಾರ್ದತೆ ಕಾಪಾಡಬೇಕು. ಇದು ಜನ ಮತ್ತು ದೇಶದ ಹಿತಾಸಕ್ತಿಯಿಂದ ಉತ್ತಮ ಎಂದರು.

      ಸುಪ್ರೀಂಕೋರ್ಟ್ ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ವಿಚಾರಣೆಗೆ ವೇಗ ನೀಡಿದೆ ಮತ್ತು ಅ. 18 ವಾದ ಪ್ರತಿವಾದ ಸಲ್ಲಿಸಲು ಕೊನೆಯ ದಿನವಾಗಿದ್ದು ನಂತರದ ದಿನಗಳಲ್ಲಿ ಪ್ರಕಟವಾಗುವ ತೀರ್ಪು ಏನೆ ಬಂದರು ಜನತೆ ಸಂಯಮ ಕಳೆದು ಕೊಳ್ಳಬಾರದು ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link