ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಬಂಧನ ಖಂಡನೀಯ..!

ಹರಪನಹಳ್ಳಿ
    ಪತ್ರಕರ್ತರು, ಸಮಾಜಿಕ ಹೋರಾಟಗಾರರ ಮೇಲೆ ಸುಳ್ಳು ಕೇಸು ಹಾಕಿಸಿ ಬಂದಿಸಿರುವುದನ್ನು ಕಂಡಿಸಿ ಎಡಪಂಥಿ ಸಂಘಟನೆಯಕಾರ್ಯಕರ್ತರು ಆಗ್ರಹಿಸಿದರು.  ಪಟ್ಟಣದ ಪ್ರವಾಸಿ ಮಂದಿರದಲ್ಲಿಗುರುವಾರ ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೊಸಳ್ಳಿ ಮಲ್ಲೇಶ್ ಮಾತನಾಡಿ, ರಾಯಚೂರಿನ ಪೊಲೀಸರು ನರಸಿಂಹಮೂರ್ತಿ ಅವರನ್ನು ಏಕಾಏಕಿ ಬಂಧಿಸಿದ್ದಾರೆ .ಇದುದಲಿತರು, ದಮನಿತರ ಪರವಾಗಿ ಹೋರಾಡುತ್ತಿರುವ ಹೋರಾಟಗಾರರದನಿಯನ್ನು ಹತ್ತಿಕ್ಕುವಕುತಂತ್ರಎಂದು ಆರೋಪಿಸಿದರು.20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದೇವೆ ಎಂಬ ಪೊಲೀಸರ ಹೇಳಿಕೆ ಹಾಸ್ಯಾಸ್ಪದ.ರಾಯಚೂರಿನಲ್ಲಿ ನಕ್ಸಲೀಯರು ನಡೆಸಿದ್ದರೆನ್ನಲಾದ ಕೃತ್ಯಗಳಿಗೆ ಸಂಬಂಧ ಕಲ್ಪಿಸಿ ರಾಜದ್ರೋಹದ ಮತ್ತುಗಂಭೀರ ಸ್ವರೂಪದ ಕೇಸು ದಾಖಲಿಸಿರುವುದನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದರೆ ಬೀದಿಗಳಿದು ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆಎಂದು ಎಚ್ಚರಿಸಿದರು.
     ನಕ್ಸಲೀಯರು ನಡೆಸಿದ್ದರೆನ್ನಲಾದ ಕೃತ್ಯಗಳಿಗೆ ಸಂಬಂಧ ಕಲ್ಪಿಸಿ ರಾಜದ್ರೋಹದಗಂಭೀರ ಸ್ವರೂಪದಕೇಸ್‍ನ್ನೂ ದಾಖಲಿಸಿರುವುದು ಸರಿಅಲ್ಲ. ದೇಶ ಮತ್ತುರಾಜ್ಯದ ರಾಜಕಾರಣಗಳು ರೈತರ ಬದುಕಿಗೆಆಸರೆ ನೀಡದೇ ಬುದ್ದಿಜೀವಿಗಳನ್ನು ಜೈಲಿಗಟ್ಟುವುದು ಸರಿಯೇ?ರೈತರ ಸಂಘಟನೆಯಂತ ಹೊರಾಟಗಾರರನ್ನು ಬೆಳೆಯದಂತೆ ನೋಡಿಕೊಳ್ಳುತ್ತಿರುವ  ಸರ್ಕಾರಗಳನ್ನು ಮುಂದಿನ ದಿನಗಳಲ್ಲಿ ಜನರೇತಕ್ಕಪಾಠ ಕಲಿಸುತ್ತಾರೆಎಂದರು. 
      ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿಯಾಗಿ ಇದ್ಲಿರಾಮಪ್ಪರವರು ಮಾತನಾಡಿಬಿ.ಜೆ.ಪಿ ಸರ್ಕಾರ ಹಿಟ್ಲರ್ ನೀತಿ ಅನುಸರಿಸುತ್ತಿದೆ .ಸರ್ಕಾರ ಬುದ್ದಿಜೀವಿಗಳನ್ನು ಜೈಲಿಗೆ ಹಾಕುವ ಮೂಲಕ ದೇಶದರಾಜಕಾರಣಕ್ಕೆಎಡೆಮಾಡಿಕೊಡುತ್ತಿದ್ದು, ಹೋರಾಟಗಾರರು ಬೆಳೆಯದಂತೆ ನೋಡಿಕೊಳ್ಳುತ್ತಿದೆ.ಇಂತಹ ಸರ್ಕಾರಕ್ಕೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದುಆವರು ಭಾರತದ ಪ್ರಜೆಗಳು ಗುಲಾಮ ಸಂತತಿಯಜನ ನಾವಾಲ್ಲ.  
 
        ಹೋರಾಟದಿಂದ ಬಂದಜನ ಮೂಲ ನಿವಾಸಿಗಳು ನಾವೇ ಎಂದರು. ದೇಶದಾದ್ಯಂತ ಬಿ.ಜೆ.ಪಿ ಸರ್ಕಾರ ಇರುವಲ್ಲೆಲ್ಲಾ ತಮ್ಮ ರಾಜಕಾರಣಿಗಳೊಂದಿಗೆ ಭಿನ್ನ ಮತ ಹೊಂದುವವರ ಮೇಲೆ ಕಾನೂನು ರೀತಿಯಲ್ಲಿ ಕಾನೂನು ಬಾಹಿರವಾಗಿ ದಾಳಿ ನಡೆಸುವುದುಅವರ ದ್ವನಿಗಳನ್ನು ಹತ್ತಿಕ್ಕಲು ಪ್ರಯತ್ನಿಸುವುದುಅವರಿಗೆಮಾಮೂಲುಆಗಿಬಿಟ್ಟಿದೆ.
     ದಲಿತರು ಆದಿವಾಸಿಗಳು ಮುಸ್ಲಿಂರು ಮತ್ತುಅಲ್ಪಸಂಖ್ಯಾತರಅಂಚೆಗೊತ್ತಲ್ಪಟ್ಟ ಸಮುದಾಯಗಳ ಮೇಲೆ ಸತತವಾಗಿ ಹೆಚ್ಚುತ್ತಿರುವ ದಾಳಿಗಳನ್ನು ಪ್ರಚೋದಿಸುವ ರೀತಿಯಲ್ಲಿ ಹೇಳಿಕೆ ನೀಡುವಜನಪ್ರತಿನಿಧಿಗಳು ನೋಡಿಇಂತಹ ಬೆಳವಣಿಗೆಗಳನ್ನು ತಡೆಗಟ್ಟಲು ಮುಂದಾಗಬೇಕಾಗಿರುವುದು ಸರ್ಕಾರವೊಂದರಕರ್ತವ್ಯವೆಂದು ನೆನಪಿಸಲು ಪ್ರಯತ್ನಿಸುತ್ತೇನೆ.  
 
     ಈ ವೇಳೆ ಷಂಶಾದ್ ಬೇಗಂ, ಹುಲಿಕಟ್ಟಿ ಹಾಲೇಶ್, ಶಿಕಾರಿ ಬಾಲಪ್ಪ, ಮಾತನಾಡಿದರು.ಈ ವೇಳೆ ಭೂಗಳ್ಳರ ವಿರೋಧಿ ಸಂಘದಅಧ್ಯಕ್ಷ ವಿ.ಪಿ.ದುರುಗದಯ್ಯ, ನಿಚ್ಚವ್ವನಹಳ್ಳಿ ಭೀಮಪ್ಪ, ರಾಮಪ್ಪ, ಮಾಬುಸಾಬ್ ಸಾಲ್ವಂಕಿ, ಭಾಷಾ, ಎ.ಡಿ. ದ್ವಾರಕೇಶ್ ಸೇರಿಇತರರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link