ಬೆಂಗಳೂರು:
ಇಸ್ತ್ರಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ 42 ವರ್ಷದ ವ್ಯಕ್ತಿ ಮೃತಪಟ್ಟಿರುವ ದುರ್ಘಟನೆ ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
‘ಉತ್ತರ ಪ್ರದೇಶದ ಬಿಜಯ್ ಕುಮಾರ್ ಎಂಬುವರೇ ಮೃತ ವ್ಯಕ್ತಿ. ಇವರು ಪತ್ನಿ, ಇಬ್ಬರು ಮಕ್ಕಳ ಜೊತೆ ಅರಕೆರೆಯಲ್ಲಿ ನೆಲೆಸಿದ್ದರು. ಇವರು ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು, ಅ. 29ರಂದು ಹುಳಿಮಾವು ಹಾಗೂ ಸುತ್ತಮುತ್ತ ಸಂಭವಿಸಿದ ಜೋರು ಮಳೆಯಿಂದಾಗಿ ಬಿಜಯ್ ಅವರ ಅಂಗಡಿಗೆ ನೀರು ನುಗ್ಗಿತ್ತು. ಅ.30ರಂದು ಬೆಳಿಗ್ಗೆ ಅಂಗಡಿಗೆ ಬಂದಿದ್ದ ಅವರು ನೀರು ತೆರವುಗೊಳಿಸಿದ್ದರು. ನಂತರ ವಿದ್ಯುತ್ ಚಾಲಿತ ಇಸ್ತ್ರಿಪೆಟ್ಟಿಗೆ ಸ್ವಿಚ್ಆನ್ ಮಾಡಿ ಕೆಲಸ ಆರಂಭಿಸಿದಾಗ, ವಿದ್ಯುತ್ ಸ್ಪರ್ಶಿಸಿ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
