ಎಂ.ಪಿ.ರವೀಂದ್ರ ನಿಗೂಢವಲ್ಲ, ಅವರೊಂದು ತೆರೆದ ಪುಸ್ತಕ: ಬಿ.ಚಂದ್ರೆಗೌಡ

ಹರಪನಹಳ್ಳಿ:

    ಎಂ.ಪಿ.ರವೀAದ್ರ ನಿಗೂಢವಲ್ಲ, ಅವರೊಂದು ತೆರೆದ ಪುಸ್ತಕವಿದ್ದಂತೆ ಎಂದು ಲಂಕೇಶ್ ಪತ್ರಿಕೆ ಅಂಕಣಕಾರ ಶಿವಮೊಗ್ಗದ ಬಿ.ಚಂದ್ರೆಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅಜರಾಮರ, ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಎಂ.ಪಿ.ರವೀಂದ್ರರವರು ಯಾವುದಕ್ಕೂ ಒತ್ತಡ ತಂದುಕೊಂಡವರಲ್ಲ.

    ಎಲ್ಲವನ್ನೂ ಹಸನ್ಮುಖಿಯಾಗಿಯೇ ನಿಭಾಯಿಸುವ ಗುಣ ಉಳ್ಳವರಾಗಿದ್ದರು. ತಾಲೂಕಿನ ಅಭಿವೃದ್ದಿಗಾಗಿ ತವಕಿಸುತ್ತಿದ್ದರು ಎನ್ನುವುದಕ್ಕೆ ಅವರ ಅನಾರೋಗ್ಯದ ದಿನಗಳಲ್ಲೂ 371 ಜೆ ಸೌಲಭ್ಯ ಬೇಕು ಎಂದು ಪಟ್ಟು ಹಿಡಿದ ಛಲದಂಕ ಮಲ್ಲರಾಗಿದ್ದರು ಎಂದರು.ಸಾಹಿತ್ಯ ಸಂಸ್ಕೃತಿ ಹರಿಕಾರರಾಗಿದ್ದ ದಿವಂಗತ ಎಂ.ಪಿ.ಪ್ರಕಾಶ್ ರವರ ಪುತ್ರ ತಂದೆಯ ಹಾದಿಯಲ್ಲೆ ಬದುಕು ಸಾಗಿಸಿದವರು. ರಾಜ್ಯ ರಾಜಕಾರಣದಲ್ಲಿ ಎಂ.ಪಿ.ಪ್ರಕಾಶ್‌ರಂತಹ ರಾಜಕಾರಣಿ ಮತ್ತೊಬ್ಬರಿಲ್ಲ.

    ಅವರ ಸಂಕೋಚದ ಸ್ವಭಾವದಿಂದಲೇ ಮುಖ್ಯಮಂತ್ರಿಯAತಹ ಹುದ್ದೆಗೆ ಅರ್ಹತೆಯಿದ್ದರೂ ಕೈಗೆ ಸಿಗದಂತೆ ಮಾಡಿಕೊಂಡರು. ಮಾಜಿ ಪ್ರಧಾನಿ ದೇವೆಗೌಡರ ನೀಚ ರಾಜಕಾರಣದಿಂದ ಎಂ.ಪಿ.ಪ್ರಕಾಶ್ ರವರಿಗೆ ಮುಖ್ಯಮಂತ್ರಿ ಹುದ್ದೆ ದೊರಕಲಿಲ್ಲ. ರಾಜ್ಯ ರಾಜಕಾರಣದಲ್ಲಿ ಎಂ.ಪಿ.ಪ್ರಕಾಶ್‌ರವರಿಗೆ ಅತ್ಯಂತ ಅನ್ಯಾಯವಾಗಿತ್ತು. ಮಕ್ಕಳ ಹಿತದೃಷ್ಟಿಯನ್ನು ಮಾತ್ರ ಹೊಂದಿದ್ದ ದೇವೇಗೌಡರು ಇತರ ಮುತ್ಸದ್ದಿಗಳ ಬಗ್ಗೆ ಎಂದೂ ಯೋಚಿಸದ ನೀಚ ರಾಜಕಾರಣಿ ಎಂದರು.

     ಕೆಪಿಸಿಸಿ ಮಹಿಳಾ ಕಾರ್ಯದರ್ಶಿ, ಎಂ.ಪಿ.ರವೀAದ್ರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ. ಗೆಲುವಿಗೆ ಮಾತ್ರ ಇತಿಹಾಸ, ಅಭಿವೃದ್ದಿಯ ಲೆಕ್ಕಕ್ಕಲ್ಲ. ಆದರೆ ಸೋಲು ಗೆಲುವಿನ ಮದ್ಯೆಯೂ ಸದಾ ಅಭಿವೃದ್ದಿಯ ತುಡಿತದ ಕುಟುಂಭ ಎಂ.ಪಿ.ಪ್ರಕಾಶ್ ಕುಟುಂಭ. ಅಗಲಿದ ಸಹೋದರ ಎಂ.ಪಿ.ರವೀAದ್ರ 371 ಜೆ ಹಾಗೂ 60 ಕೆರೆಗಳಿಗೆ ನೀರಿನ ಯೋಜನೆ ತಾಲೂಕಿಗೆ ಬಿಟ್ಟು ಹೋದ ಹೆಜ್ಜೆ ಗುರುತುಗಳು ಎಂದರು.

    ಸಂಸ್ಕಾರ ಮೀರಿದ್ದು ರಾಜಕಾರಣವಲ್ಲ. ಸಂಸ್ಕಾರ ಸಂಸ್ಕೃತಿ ಎಂ.ಪಿ.ಪ್ರಕಾಶ್ ಹಾಕಿಕೊಟ್ಟ ಬುನಾದಿ. ಅವರ ಆದರ್ಶದಂತೆಯೇ ಅವರ ಕುಟುಂಭ ಬದ್ದತೆಯಿಂದ ಸದಾ ಜನಾನುರಾಗಿಯಾಗಿ ಬದುಕುತ್ತಿದೆ. ಸಹೋದರನ ಸಾವಿನ ನಂತರ ಒಂದು ವರ್ಷದ ಕಾಲ ತಾಲೂಕಿನ ಜನರೊಂದಿಗೆ ಬೆರೆತು ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಕಮಿಟ್‌ಮೆಂಟ್ ಮುಗಿಸಿದ್ದೇನೆ. ಇನ್ನು ಮುಂದೆ ಪಕ್ಷವನ್ನು ಬೆಳೆಸುವ ಜವಾಬ್ದಾರಿ ನಿಮ್ಮದಾಗಿದೆ.

     ನಾನು ಶಾಸಕಿಯಾಗಬೇಕು ಎಂದು ಅಪೇಕ್ಷೆಯಿಂದ ಇಲ್ಲಿಗೆ ಬಂದಿರಲಿಲ್ಲ. ಯಾರಿಗೇ ಟಿಕೇಟ್ ಸಿಕ್ಕರೂ ನೀವು ಇಷ್ಟಪಟ್ಟು ಕರೆದರೆ ನಿಮ್ಮ ಜೊತೆಗಿದ್ದು ಪಕ್ಷಕ್ಕಾಗಿ ದುಡಿಯುತ್ತೇನೆ. ಸ್ವಾರ್ಥಕ್ಕಾಗಿ ಅಲ್ಲ. ಎಂ.ಪಿ.ರವೀAದ್ರರವ ಕೆಲಸಗಳ ಋಣ ತೀರಿಸಬೇಕಿದ್ದರೆ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿಯಿರಿ. ಪಕ್ಷದ ಏಳಿಗೆ ನಿಮಗೆ ಬಿಟ್ಟ ವಿಚಾರ ಎಂದು ಕಾರ್ಯಕರ್ತರಿಗೆ ತಿಳಿಸಿದರು.

     ಕಾಂಗ್ರೆಸ್ ಪಕ್ಷದ ಸಂಘಟನೆಗೆ, ನೀವು ಯಾರನ್ನ ಗುರುತಿಸಿತ್ತಿರೋ ಅವರ ಜೊತೆಗೆ ಪಕ್ಷದ ಸಂಘಟನೆಗೆ ದುಡಿಯುತ್ತೇನೆ ನಮ್ಮ ಕುಟುಂಬದಿAದ ಯಾರಿಗೂ ತೊಂದರೆ ಆಗುವುದು ಬೇಡ, ಮುಂದೆ ನೀವಾಗಿ ನಮಗೆ ಆಶೀರ್ವದಿಸಿದರೆ ಮುಂದುವರೆಯತ್ತೇನೆ, ಇಲ್ಲವಾದರೆ ಹಿಮಾಲಯಕ್ಕೆ ಹೋಗಿ ಪುಸ್ತಕವನ್ನು ಓದುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಲ್ಮಠ, ಮೈದೂರು ರಾಮಪ್ಪ, ರವಿ ಯುವ ಶಕ್ತಿ ಪಡೆ ಅಧ್ಯಕ್ಷರಾದ ಉದಯ್ ಶಂಕರ್, ಪ್ರಸಾದ್ ಕಾವಡ್ಕೆರ್, ಗೋಣೆಪ್ಪ ಕುರಿತಂತೆ ಹಲವರು ಎಂ.ಪಿ. ರವೀಂದ್ರ ರವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

     ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಕೆ.ಪ್ರಕಾಶ್, ಪುರಸಭೆ ಸದಸ್ಯರಾದ ಎಂ.ವಿ ಅಂಜಿನಪ್ಪ, ವೆಂಕಟೇಶ್, ಗೊಂಗಡಿ ರಾಜಣ್ಣ, ಚಿಕ್ಕೇರಿ ಬಸಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಓ.ರಾವiಪ್ಪ, ಹುಲಿಕಟ್ಟಿ ಚಂದ್ರಪ್ಪ, ಚಂದ್ರೆಗೌಡ, ಕುಬೇರಗೌಡ, ಉದಯ ಶಂಕರ್, ಜಯಲಕ್ಷ್ಮಿ, ಇರ್ಫಾನ್ ಮುದಗಲ್, ಗುಡಿ ನಾಗರಾಜ್, ಮತ್ತೂರು ಬಸವರಾಜ್, ಮಲ್ಲಿಕಾರ್ಜುನ, ಜಂಬಣ್ಣ, ಬಸವರಾಜಯ್ಯ, ಎಂ.ಪಿ .ರವೀಂದ್ರ ಅಭಿಮಾನಿಗಳು ಹಾಗೂ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಭಾಗಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link