ಹೊಳಲ್ಕೆರೆ:
ಎಲ್ಲಾ ಜಯಂತಿಗಳಂತೆ ಕನಕದಾಸರ ಜಯಂತಿಯನ್ನು ಸರ್ಕಾರದ ವತಿಯಿಂದ ಸಾಂಕೇತಿಕವಾಗಿ ನವಂಬರ್ 15ರಂದು ಪಟ್ಟಣದಲ್ಲಿ ಆಚರಣೆ ಮಾಡಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲುಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ಕುರುಬ ಸಮಾಜದ ಮುಖಂಡರ ಶುಕ್ರವಾರ ಪೂರ್ವಭಾವಿ ಸಭೆ ಮಿನಿವಿಧಾನ ಸೌಧ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಕನಕ, ಬಸವ, ವಾಲ್ಮೀಕಿ ಮುಂತಾದ ಮಹಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಅವರುಗಳು ಸಮಾಜಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು. ಅವರು ಸ್ವಸ್ಥ ಸಮಾಜ ನಿರ್ಮಾಣ ಮಾಡಿ ಇಡೀ ಸಮೂಹಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ಅವರ ಆದರ್ಶ ಮತ್ತು ಒಳ್ಳೆಯ ತತ್ವಗಳನ್ನು ಪ್ರತಿಯೊಬ್ಬರು ಪರಿಪಾಲನೆ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರ ಎಲ್ಲ ಜಯಂತಿಗಳನ್ನು ಆಚರಣೆ ಮಾಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಆಯಾ ಸಮಾಜದ ಸದಸ್ಯರು, ಮುಖಂಡರು ಹೆಚ್ಚಿನ ಸಂಖ್ಯೆಲ್ಲಿ ಆಚರಣೆಯಲ್ಲಿ ಭಾಗವಹಿಸಿ ಅವರ ತತ್ವ ಸಿದ್ದಾಂತಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಇದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸರ್ಕಾರಿ ಅಧಿಕಾರಿಗಳು ನೌಕರರು, ಸಮಾಜ ಬಾಂಧವರು ಹೆಚ್ಚಿನ ಸಹಕಾರ ನೀಡಬೇಕೆಂದು ಶಾಸಕರು ಕರೆ ನೀಡಿದರು.
ತಾಳೀಕಟ್ಟೆಯಲ್ಲಿ ನವಂಬರ್ 15ರ ನಂತರ ಕುರುಬ ಸಮಾಜ ಕನಕ ಜಯಂತಿಯನ್ನು ಅತ್ಯಂತ ವೈಭವದಿಂದ ಅದ್ದೂರಿಯಿಂದ ಅದ್ಭುತವಾಗಿ ಆಚರಣೆ ಮಾಡಲು ಸಮಾಜದ ಮುಖಂಡರಾದ ಜಿ.ಪಂ. ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಪ.ಪಂ. ಸದಸ್ಯ ಬಿ.ಎಸ್.ರುದ್ರಪ್ಪ, ತಾ.ಪಂ ಮಾಜಿ ಸದಸ್ಯ ನಾಗಪ್ಪ ತಾಲ್ಲುಕು ಕುರುಬ ಸಮಾಜದ ಅಧ್ಯಕ್ಷ ಬಿ.ಹೆಚ್.ಪ್ರಕಾಶ್, ಪತ್ರಗಾರ ಲೋಕೇಶ್, ವಕೀಲ ರಮೇಶ್, ಶಿಕ್ಷಕ ಕಲ್ಲೇಶಪ್ಪ ಮುಂತಾದವರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.
ತಾಲ್ಲುಕು ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷ ತಹಶೀಲ್ದಾರ್ ಕೆ.ನಾಗರಾಜ್, ಇಒ ತಾರಾನಾಥ್, ಪ.ಪಂ. ಮುಖ್ಯಾಧಿಕಾರಿ ವಾಸೀಂ ಮತ್ತು ಎಲ್ಲಾ ತಾಲ್ಲುಕು ಮಟ್ಟದ ಮುಖ್ಯಸ್ಥರು ಮತ್ತು ಸಮಾಜದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
