ರಾಯಚೂರು:
ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಅವಘಡ ಸಂಭವಿಸಿದ್ದು, ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಗುತ್ತಿಗೆ ಕಾರ್ಮಿಕ ದೀಪಕ ನಾಯಕ (27) ಮೃತ ದುರ್ದೈವಿ. ಒಡಿಸಾ ರಾಜ್ಯದ ಅಂಗೋಲ ಜಿಲ್ಲೆಯ ಬನವಾಲ್ ಪತ್ ಗ್ರಾಮದ ಯುವಕ, ಕಲ್ಲಿದ್ದಲು ವಿಭಾಗದ 1 ರಲ್ಲಿ ಕಲ್ಲಿದ್ದಲು ಪೂರೈಕೆ ಮಾಡುವ ಬೆಲ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಕಲ್ಲಿದ್ದಲು ಬಂಕರ್ನಲ್ಲಿ ಕೆಲಸ ಮಾಡುವಾಗ ದುರ್ಘಟನೆ ಸಂಭವಿಸಿದ್ದು, ಬೆಲ್ಟ್ನಲ್ಲಿ ಕಂಡುಬಂದ ಕಲ್ಲನ್ನು ತುಂಡರಿಸಲು ಪ್ರಯತ್ನಿಸುವಾಗ ಆಯತಪ್ಪಿ ಬೆಲ್ಟ್ ಮೇಲೆ ಬಿದ್ದಿದ್ದಾರೆ. ಕಲ್ಲಿದ್ದಲು ಪುಡಿ ಮಾಡುವ ಬಂಕರ್ನಲ್ಲಿ ಸಿಲುಕಿದ್ದರಿಂದ ದೇಹ ಛಿದ್ರವಾಗಿದೆ. ಕೂಡಲೇ ಇನ್ನೊಬ್ಬ ಉದ್ಯೋಗಿ ಗಮನಿಸಿ, ನೆರವಿಗೆ ಧಾವಿಸಿದರೂ ದೀಪಕ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಶಕ್ತಿನಗರ ಠಾಣೆಯ ಪಿಎಸ್ಐ ರಾಮಚಂದ್ರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/Untitled-1-17.gif)