ಶಿಗ್ಗಾವಿ :

ಶಿಗ್ಗಾವಿ ತಾಲೂಕಿನಲ್ಲಿ ವಿತರಿಸುತ್ತಿರುವ ಸೀಮೆಯಣ್ಣೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಬಂದ ಸೀಮೆಯಣ್ಣೆ ಸಾರ್ವಜನಿಕರಿಗೆ ವಿತರಿಸಿ ಜೀವನ ಸಾಗಿಸುತ್ತಿರುವ ಸುಮಾರ 25 ಕ್ಕೂ ಹೆಚ್ಚು ಕುಟುಂಬಗಳ ಸ್ಥಿತಿ ಕಷ್ಟದಲ್ಲಿವೆ ಕೂಡಲೇ ಸರಿಪಡಿಸವಂತೆ ಒತ್ತಾಯಿಸಿ ಶಿಗ್ಗಾವಿ ತಾಲೂಕಾ ಪಡಿತರ ಕಿರುಕುಳ (ಚಿಲ್ಲರೆ) ಸೀಮೆಯಣ್ಣೆ ವಿತರಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕಾ ತಹಶೀಲ್ದಾರಿಗೆ ಬುಧವಾರ ಮನವಿ ಅರ್ಪಿಸಿಲಾಯಿತು.
ಮನವಿ ಅರ್ಪಿಸಿ ಮಾತನಾಡಿದ ಸಂಘದ ಅದ್ಯಕ್ಷ ಕೆ ಎಸ್ ನೆಲ್ಲೂರ, ಉಚ್ಚನ್ಯಾಯಾಲಯದ ಧಾರವಾಡ ಪೀಠ 20-03-2015 ರ ಪ್ರಕಾರ ಬಿಡುಗಡೆಯಾಗುತ್ತಿದ್ದ ಸೀಮೆಯಣ್ಣೆ ಮತ್ತೆ ಅದೇ ಪ್ರಕಾರ ಬಿಡುಗಡೆ ಮಾಡಬೇಕು, 27-12-2013 ರ ಸುತ್ತೋಲೆಯ ಪ್ರಕಾರ ಉಚ್ಚ ನ್ಯಾಯಾಲಯದ ಧಾಖಲಾಗಿದ್ದ ರಿಟ್ ಅರ್ಜಿಯು ದಿ. 11-09-2014 ರಂದು ನ್ಯಾಯಾಲಯದ ಆದೇಶದ ಪ್ರಕಾರ ಹಳೆಯ ಪಡಿತರ ಚೀಟಿಗೆ ಪೂರೈಕೆ ಆಗುತ್ತಿರುವ ಸೀಮೆಯಣ್ಣೆಯನ್ನು ಕೇವಲ ಸೀಮೆಯಣ್ಣೆ ವಿತರಿಸುತ್ತಿರುವ ಪರವಾನಿಗೆದಾರರಿಗೆ ವಿತರಿಸಲು ಆದೇಶಿಸಿದೆ, ಹೀಗಿದ್ದರೂ ದಿನದಿಂದ ದಿನಕ್ಕೆ ನಮಗೆ ಸೀಮೆಯಣ್ಣೆ ಪ್ರಮಾಣ ಕಡಿಮೆ ಮಾಡುತ್ತಿರುವುದರಿಂದ ಜೀವನ ಕಷ್ಟವಾಗಿದೆ, ಅಲ್ಲದೇ ಪಿಡಿಎಸ್ 1192 ರ ಪ್ರಕಾರ ಪರವಾನಿಗೆ ಮತ್ತು ಪ್ರಾಧಿಕಾರವನ್ನ ನಾವು ಸಹಿತ ಹೊಂದಿದ್ದು ನಮಗೂ ಸಹಿತ ಆಹಾರ ಧಾನ್ಯವನ್ನ ವಿತರಿಸುವುದನ್ನ ವಹಿಸಿ ಕೊಡಬೇಕು, ಸರಕಾರದ ಮಾನದಂಡದ ಪ್ರಕಾರ ನಾವೂ ನಡೆದುಕೊಳ್ಳುತ್ತೇವೆ ಎಂದರಲ್ಲದೆ ಮೊದಲಿನಂತೆ ಸೀಮೆಯಣ್ಣೆ ಬಿಡುಗಡೆ ಮಾಡಿ ಅನುಕೂಲ ಮಾಡಿಕೊಡಲು ತಿಳಿಸಿದರು.
ಸಂಘದ ಕಾರ್ಯದರ್ಶಿ ಪ್ರಕಾಶ ಲಂಡೆತ್ತಿನವರ ಮಾತನಾಡಿ, ತಾಲೂಕಿನಲ್ಲಿ 3 ರಿಂದ 4 ಅಡುಗೆ ಅನೀಲ ಸರಬರಾಜು ಮಾಡುತ್ತಿರುವ ಸಗಟು ಮಾರಾಟಗಾರರು ತಾವೇ ಚಿಲ್ಲರೇ ವಿತರಣೆಗೆ ಮುಂದಾಗಿದ್ದಾರೆ ಆದ್ದರಿಂದ ಅದೇ ರೀತಿ ನಮಗೂ ಅಡುಗೆ ಅನೀಲ ವಿತರಣೆ ಮಾಡಲು ವಹಿಸಿದರೆ ನಮ್ಮ ಜೀವನದ ಕಷ್ಟ ಪರಿಹಾರವಾಗುತ್ತದೆ ಆದ್ದರಿಂದ ಸೂಕ್ತ ಪರಿಹಾರ ನೀಡಲು ವಿನಂತಿಸಿದರು.
ಗೌರವಾದ್ಯಕ್ಷ ವಿ ವಾಯ್ ಆಡೀನ, ಕಾರ್ಯಾದ್ಯಕ್ಷ ಆರ್ ಎಂ ಕುಲಕರ್ಣಿ ಪಧಾದಿಕಾರಿಗಳಾದ ಎಂ ಎನ್ ಕಲ್ಲಾಪೂರ, ವಿ ಪಿ ಅಂಗಡಿ, ಎಸ್ ಬಿ ಅತ್ತೀಗೇರಿ, ಸಿ ಬಿ ಕುಂದಗೋಳ, ಜಿ ಸಿ ಪಟ್ಟಣಶೆಟ್ಟರ, ಬಿ ಪಿ ಕಲಿವಾಳ, ಟಿ ಎನ್ ತಳವಾರ, ಜೆ ಎ ಗೊಬ್ಬರಗುಂಪಿ, ಎಸ್ ಜಿ ಸೂರಗೊಂಡ, ವಿ ಜಿ ವಾಲಿಶೆಟ್ಟರ, ವಿ ವಿ ಮಹಾಜನ ಶೆಟ್ಟರ, ವಿ ವಿ ಸೊಬರದ, ಗೀತಾ ಪಟ್ಟಣಶೆಟ್ಟಿ, ಶೇಖರಗೌಡ ಪಾಟೀಲ, ಎನ್ ಜಿ ದೊಡ್ಡಮನಿ, ಜಿ ಎಸ್ ಶೆಟ್ಟರ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
