ಹೊತ್ತಿ ಉರಿದ ಗೋದಾಮು : 9 ಮಂದಿ ಸಜೀವ ದಹನ!!

ದೆಹಲಿ :

     ಬಟ್ಟೆ ಗೋದಾಮು ಬೆಂಕಿಗಾಹುತಿಯಾಗಿ, ಅನಾಹುತದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ದೆಹಲಿಯ ಕಿರಾರಿ ಪ್ರದೇಶದಲ್ಲಿ ಸಂಭವಿಸಿದೆ.

     ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ಅನಾಹುತ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

      ಮೃತರನ್ನು ರಾಮಚಂದ್ರ ಜಾ, ಸುದ್ರಿಯಾ ದೇವಿ, ಸಂದು ಜಾ, ಉದಯ್ ಚೌಧರಿ, ಮುಸ್ಕಾನ್, ಅಂಜಲಿ, ಆದರ್ಶ್, ತುಳಸಿ ಎಂದು ಗುರುತಿಸಲಾಗಿದೆ. ಓರ್ವ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

      ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಬಟ್ಟೆ ಗೋದಾಮಿದ್ದು, ಮೊದಲು ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಈ ಬೆಂಕಿ ಕಟ್ಟಡದ ಮೂರನೇ ಮಹಡಿಯವರೆಗೂ ತಲುಪಿದ್ದು, ಗೋದಾಮಿನ ತುಂಬ ಬಟ್ಟೆ ತುಂಬಿದ್ದ ಕಾರಣಕ್ಕೆ ಬೆಂಕಿ ಬಹುಬೇಗ ಮೂರನೇ ಮಹಡಿವರೆಗೂ ಆವರಿಸಿತು. ಇದನ್ನು ಕಂಡ ತಕ್ಷಣ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದಕ್ಕೆ ಹರಸಾಹಸ ಪಟ್ಟಿದ್ದಾರೆ.

     ಬೆಂಕಿಗೆ ಬಟ್ಟೆಗಳು ಸುಟ್ಟು ಕರಕಲಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

Recent Articles

spot_img

Related Stories

Share via
Copy link