ಹಾವೇರಿ
ನೆಲೋಗಲ್ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೆಲ ಸಮಯ ವಿದ್ಯಾರ್ಥಿಯಾಗಿ, ಕೆಲ ಸಮಯ ಶಿಕ್ಷಕನಾಗಿ ಮಕ್ಕಳು ಹಾಗೂ ಶಿಕ್ಷಕರ ಮನಗೆದ್ದರು.ಸಚಿವರು ಹತ್ತನೆ ತರಗತಿ ಕೊಠಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ವಿದ್ಯಾರ್ಥಿಯೋರ್ವ ತ್ರಿಭುಜಗಳ ಪ್ರಮೇಯ ಕಪ್ಪು ಹಲಗೆಯ ಮೇಲೆ ನಿರೂಪಿಸುತ್ತಿದ್ದುದನ್ನು ಸಚಿವರು ಮಕ್ಕಳೊಂದಿಗೆ ಕೂತು ವಿದ್ಯಾರ್ಥಿ ವಿವರಿಸಿದ ಪ್ರಮೇಯವನ್ನು ಆಲಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡಿಸಿದ ಅವರು, “ಪರೀಕ್ಷೆಗೆ ತಯಾರಿದ್ದೀರಾ?” ಎಂದು ವಿದ್ಯಾರ್ಥಿಗಳಿನ್ನು ಪ್ರಶ್ನಿಸಿದರು ಮಕ್ಕಳು ಆತ್ಮವಿಶ್ವಾಸದಿಂದ “ಸಿದ್ದವಿದ್ದೇವೆ” ಎಂದು ಉತ್ತರಿಸಿದರು.
ಪರೀಕ್ಷೆ ತಯಾರಿ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರಿಂದ ಮಾಹಿತಿ ಪಡೆದ ಅವರು ಬೆಂಗಳೂರಿನ ಆನೇಕಲ್ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಅಂಜಿನಪ್ಪ ಎಸ್.ಎಸ್.ಎಲ್.ಸಿ , ಪಿಯುಸಿ, ಸಿ.ಇ.ಟಿ ಹಾಗೂ ಜೆ.ಇ.ಇ. ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಮುಂಬಯಿಯ ಐ.ಐ.ಟಿ. ಓದುತ್ತಿರುವ ಕಥೆ ಹೇಳುವುದರ ಮೂಲಕ ಪ್ರೇರಪಿಸಿದರು. ನೀವು ಸಹ ಐ.ಎ.ಎಸ್. ಹಾಗೂ ಐ.ಪಿ.ಎಸ್. ಚಾರ್ಟೆಡ್ ಅಕೌಂಟಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸಗಬೇಕು ಎಂದು ಹುರಿದುಂಬಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ ತುಂಬಾ ಮುಖ್ಯವಾದದು, ವೃತದಂತೆ ಪರೀಕ್ಷೆಗೆ ಸಿದ್ಧತೆ ನಡೆಸಿ, ಕಾಯಿಲೆ ಬೀಳಬೇಡಿ, ಆತಂಕಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪೋಷಕರಿಂದ ಮಕ್ಕಳ ವ್ಯಾಸಾಂಗಕ್ಕೆ ಬದ್ಧವಾಗಿರುವಂತೆ ಪ್ರತಿಜ್ಞೆ ತೆಗೆದುಕೊಳ್ಳಿ, ಪ್ರತಿ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾಹಿತಿ ನೀಡಿ. ಮನೆಯಲ್ಲಿ ವಿದ್ಯುತ್ ಹಾಗೂ ಇತರೆ ಸಮಸ್ಯೆಗಳು ಇರುವವರಿಗೆ ಶಾಲೆಯಲ್ಲಿ ವಾಸ್ತವ್ಯ ಕಲ್ಪಿಸಿ ಓದಲು ನೆರವಾಗಿ, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುವ ಪರೀಕ್ಷಾ ಕೇಂದ್ರಗಳಿಲ್ಲೇ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯೋಪಧ್ಯಾಯರಿಗೆ ಸೂಚನೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
