ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವಂತಿಲ್ಲ : ಆರ್.ಅಶೋಕ್

ಹಿರಿಯೂರು :

     ರಾಜ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಪೋಲೀಸರು ಯಾವುದೇ ಕಾರಣಕ್ಕೂ ಅಡ್ಡಿ ಪಡಿಸುವಂತಿಲ್ಲ ಎಂಬುದಾಗಿ ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಪೋಲೀಸರಿಗೆ ಸೂಚನೆ ನೀಡಿದ್ದಾರೆ.

     ಯಾವುದೇ ಪೋಲೀಸ್ ಅಧಿಕಾರಿಗಳು ಅಥವಾ ಪೋಲೀಸರು ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ಮೀಡಿಯಾ ಅವರ ಸೇವೆಯೂ ಅಗತ್ಯ ಸೇವೆಗಳ ವ್ಯಾಪ್ತಿಗೆ ಬರಲಿದೆ ಎಂಬುದಾಗಿ ಕೇಂದ್ರ ಸರ್ಕಾರವೇ ಹೇಳಿದೆ, ಜನರಿಗೆ ಮಾಧ್ಯಮದವರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಯಾವುದೇ ಪೋಲೀಸ್ ಅಧಿಕಾರಿ, ಮಾಧ್ಯಮಪ್ರತಿನಿಧಿಗಳನ್ನು ಎಲ್ಲಿಯೂ ತಡೆಯಬಾರದು, ಯಾವುದೇ ರೀತಿ ತೊಂದರೆ ಕೊಡಬಾರದು, ಅಂತಹ ಪ್ರಕರಣಗಳು ಕಂಡು ಬಂದರೆ ಅಂತಹ ಅಧಿಕಾರಿ ಹಾಗೂ ಪೋಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಸಚಿವರಾದ ಆರ್.ಅಶೋಕ್ ಹೇಳಿದ್ದಾರೆ.

      ರಾಜ್ಯದಲ್ಲಿ ಮಾರಕ ಕೊರೊನಾ ರೋಗ ಹರಡುತ್ತಿರುವ ಸಂದರ್ಭದಲ್ಲಿ ಸಹ ಪ್ರಾಣದ ಹಂಗು ತೊರೆದು ಮೀಡಿಯಾದವರು ಕೆಲಸಮಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಈ ಮೀಡಿಯಾ ಪಾಸ್ ಇದ್ದವರಿಗೆ ರಾಜ್ಯದಲ್ಲಿ ಪೋಲೀಸರು ಯಾವುದೇ ರೀತಿಯ ತೊಂದರೆ ಕೊಡಬಾರದು ಮತ್ತು ಮೀಡಿಯಾದವರ ಕರ್ತವ್ಯಕ್ಕೆ ಅಡ್ಡಿ ಪಡಿಸಬಾರದು ಎಂಬುದಾಗಿ ಆರ್.ಅಶೋಕ್ ಪೋಲೀಸರಿಗೆ ಸೂಚನೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link