ಪಾವಗಡ
ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಶನಿವಾರ ಪಾವಗಡ ಪಟ್ಟಣದ ಕೊಳಚೆ ಪ್ರದೇಶಗಳ ಹಕ್ಕಿ-ಪಿಕ್ಕಿ ಜನಾಂಗದವರಿಗೆ ಆಹಾರ ಧಾನ್ಯಗಳ ಕಿಟ್ನ್ನು ಹಾಗೂ ಪೊಲೀಸ್ ಇಲಾಖೆಗೆ ಆರೋಗ್ಯ ಕಿಟ್ ಗಳನ್ನು ಸ್ವಂತ ಖರ್ಚಿನಿಂದ ವಿತರಿಸಿದರು.
ನಂತರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ತಾ. ಮಟ್ಟದ ಅಧಿಕಾರಿಗಳ ಸಭೆಯನ್ನು ಜರುಗಿಸಿ ಕೋವಿಡ್- 19 ಹರಡದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ಬಳಿ ಚರ್ಚೆ ನಡೆಸಿದರು.ಅವರು ಶನಿವಾರ ಕೊಳಚೆ ಪ್ರದೇಶದಲ್ಲಿ ವಾಸಿಸುವ ಮತ್ತು ಬಡ ಕೂಲಿ ಕಾರ್ಮಿಕರಿಗೆ ದಿನಸಿ ವಸ್ತುಗಳನ್ನು ವಿತರಿಸಿ ಮಾತನಾಡಿ, ಸರ್ಕಾರ ಬಡವರಿಗಾಗಿ ವಿವಿಧ ಯೋಜನೆಗಳ ಮುಖಾಂತರ ಸಹಾಯ ಧನ ನೀಡುತ್ತಿದೆ. ಪ್ರಜೆಗಳು ಸುರಕ್ಷಿತವಾಗಿರಲೆಂದು ಭಾರತ ಲಾಕ್ಡೌನ್ ಮಾಡಿರುವುದು. ಪ್ರ್ರಧಾನಿಮಂತ್ರಿ ನರೇಂದ್ರ ಮೋದಿ ಶ್ರಮಕ್ಕೆ ತಮ್ಮೆಲ್ಲರ ಕೈ ಜೋಡಿಸಿ ಸಹಕಾರ ನೀಡಬೇಕಾಗಿದೆ ಎಂದರು.
21 ದಿನಗಳ ಕಾಲ ಜನರು ಮನೆಯಲ್ಲಿ ಇದ್ದರೆ ಅವರು ಜೀವನ ನಡೆಸಲು ಸಾಧ್ಯವಿಲ್ಲದ ಕಾರಣ, ಬಡವರಿಗೋಸ್ಕರ ಯೋಜನೆಗಳನ್ನು ಜಾರಿಗೆ ತಂದು, ಭಾರತ ಲಾಕ್ ಡೌನ್ ಮಾಡಿದ್ದಾರೆ ಎಂದರು.ಸಾರ್ವಜನಿಕರ ಸಂಚಾರ, ದಿನಸಿ ಅಂಗಡಿಗಳ ವ್ಯಾಪಾರ ವಹಿವಾಟು ಯಾವ ಸಮಯದವರೆಗೆ ನಡೆಯುತ್ತದೆ ಎಂದು ಪಾವಗಡ ಪೊಲೀಸ್ ಠಾಣಾ ಸಿ.ಪಿ,ಐ. ನಾಗರಾಜುರನ್ನು ಕೇಳಿದರು. ಆಗ ಉತ್ತರಿಸಿದ ಸಿಪಿಐ ಬೆಳಗ್ಗೆ 10 ಘಂಟೆಯವರೆಗೆ ಮಾತ್ರ ದಿನಸಿ ಅಂಗಡಿಗಳ ವ್ಯಾಪಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಉತ್ತರಿಸಿದರು.
ಪಾವಗಡ ಆಸ್ಪತ್ರೆಯ ವೈದ್ಯ ಡಾ. ಕಿರಣ್ರನ್ನು ಎಷ್ಟು ಮಾಸ್ಕ್ ಮತ್ತು ಸ್ಯಾನಿಟೈಸರ್ರನ್ನು ವಿತರಣೆ ಮಾಡಿದ್ದೀರಿ ಎಂದು ಕೇಳಲಾಗಿ, ಆಸ್ಪತ್ರೆಗೆ ಅತಿ ಕಡಿಮೆ ಆರೋಗ್ಯ ಕಿಟ್ಗಳು ಬಂದಿರುವುದಾಗಿ ಕಿರಣ್ ತಿಳಿಸಿದರು.ತಹಸೀಲ್ದಾರ್ ವರದರಾಜು ಮಾತನಾಡಿ, ರೈತರು ಬೆಳೆದ ಬೆಳೆಗಳನ್ನು ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡಲು ಪಾಸ್ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಬಿ.ಪಿ.ಎಲ್. ಕಾರ್ಡ್ದಾರರ ಸಂಖ್ಯೆಯ ವಿವರವನ್ನು ಆಹಾರ ಶಿರಸ್ತೇದಾರರಾದ ಬಸವರಾಡ್ರಿಂದ ಕೇಳಿ ಪಡೆದರು.
ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್, ಇಓ ನರಸಿಂಹಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ಚಂದ್ರ, ಎಸ್.ಐ. ನಾಗರಾಜ್, ಬಿ.ಜೆ.ಪಿ.ಮುಖಂಡ ಡಾ.ಜಿ.ವೆಂಕಟರಾಮಯ್ಯ, ತಾ. ಬಿ.ಜೆ.ಪಿ. ಅಧ್ಯಕ್ಷ ರವಿಶಂಕರ್ ನಾಯ್ಕ, ಕರಿಯಣ್ಣ, ಮಾಜಿ ಅಧ್ಯಕ್ಷ ಜಿ.ಟಿ. ಗಿರೀಶ್, ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ರವಿ, ಮಂಜುನಾಥ್, ಆಲ್ಕುಂದ್ರಾಜ್, ರಘು, ಶೇಖರ್ಬಾಬು, ಕಡಪಲಕೆರೆ ನವೀನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
