ಹಗರಿಬೊಮ್ಮನಹಳ್ಳಿ:

ರಾಜ್ಯದಲ್ಲಿ ಒಂದುಕಡೆ ಕೊರೋನಾ ವೈರಸ್ನ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇನ್ನೊಂದುಕಡೆ ಲಾಕ್ಡೌನ್ ಮತ್ತಷ್ಟು ಬಿಗಿಯಾಗುತ್ತಿದೆ, ಎಲ್ಲಿ ಏನೇ ಆದರೂ ಹಗರಿಬೊಮ್ಮನಹಳ್ಳಿ ಮಾತ್ರ ಯಾವುದಕ್ಕೂ ಕೇರ್ ಮಾಡದ ಸಾರ್ವಜನಿಕರು ತರಕಾರಿ ಕೊಳ್ಳಲು ನೂಕುನುಗ್ಗಲು ಕಡಿಮೆಯಾಗುವ ಲಕ್ಷಣವಂತ ಕಂಡುಬರುತ್ತಿಲ್ಲ.
ಪಟ್ಟಣದ ಹಳೇ ಬಸ್ತಂಗುದಾಣದಿಂದ ಸರ್ಕಾರಿ ಕಾಲೇಜ್ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ಇದಾದ ಬಳಿಕ ಶಾಸಕ ಎಸ್.ಭೀಮಾನಾಯ್ಕ ಸಭೆ ನಡೆಸುವ ಮೂಲಕ ಲಾಕ್ಡೌನ್ಗೆ ಅತ್ಯಂತ ಕಠಿಣ ಕ್ರಮವಹಿಸಿ ಎಂದು ಸಭೆ ನಡೆಸಿದ್ದರು. ಆದರೂ, ಕಾಲೇಜ್ ಆವರಣದಿಂದ ಈಶ್ವರ ದೇಗುಲದ ಮುಂದೆ ಗುರುವಾರ ತಾತ್ಕಲಿಕವಾಗಿ ತೆರೆಯಲಾಗಿದ್ದ ಸ್ಥಳಾಂತರಗೊಂಡ ತರಕಾರಿ ಮಾರುಕಟ್ಟೆಗೆ ಜನಜಂಗುಳಿ ಮುಗೆಬಿದ್ದಿದ್ದು ಕಂಡುಬಂದಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶವಿದ್ದರೂ, ಅಲ್ಲಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವ ವಿಷಯ ಗೊತ್ತಿದ್ದರೂ, ತಾಲೂಕು ಆಡಳಿತ, ಪುರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಧ್ವನಿವರ್ಧಕಗಳ ಮೂಲಕ ಸಂಪೂರ್ಣ ಕಟ್ಟೆಚ್ಚರ ಘೋಷಿಸಿದ್ದರೂ, ಶಾಸಕರ ಆದೇಶವನ್ನೂ ಕೇರ್ಮಾಡದೆ, ಸಾಮಾಜಿಕ ಅಂತರವನ್ನು ಕಾಪಾಡದ ಜನತೆ, ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ತರಕಾರಿ ಮಾರುಕಟ್ಟೆಗಷ್ಟೇ ಅಲ್ಲದೆ, ಕಿರಾಣಿ ಅಂಗಡಿಗಳಿಗೂ, ಪೆಟ್ರೋಲ್ ಬಂಕ್ಗಳಿಗೂ ಮುಗೆಬಿದ್ದರೂ. ಇನ್ನೂ ಕೆಲವ್ಯಾಪಾರಿಗಳಿಗೆ ಮಾಸ್ಕ್ ಹಾಕಿಕೊಳ್ಳುವ ಗೋಜಿಗೂ ಹೋಗದೆ ವ್ಯಾಪಾರದಲ್ಲಿ ತಲ್ಲಿನರಾಗಿದ್ದು ಕಂಡುಬಂದಿತು. ಇದನ್ನೆಲ್ಲ ನೋಡುವ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಪಾಲಿಸುವ ಜನರು ಮುಂದೆ ಇನ್ನೂ ಏನು ಕಾದಿದೆಯೋ ಎಂದು ತಮ್ಮಷ್ಟಕ್ಕೆ ತಾವೇ ಪ್ರಶ್ನೆಮಾಡಿಕೊಳ್ಳುವಂತ ಪರಿಸ್ಥಿತಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
