ಮಿಡಿಗೇಶಿ
ಏ. 15 ರಂದು ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಹೋಬಳಿಗೆ ಸೇರಿದ ನಲ್ಲೇಕಾಮನಹಳ್ಳಿ ಬೇಡತ್ತೂರು ದಾರಿ ಮಧ್ಯೆ ಇರುವ ಎಂ.ಎಸ್.ಐ.ಎಲ್ನ ಮದ್ಯದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿಯ ರೋಲಿಂಗ್ ಷಟರ್ನ್ನು ಹಾರೆಕೋಲಿನಿಂದ ಮೀಟಿ ಬಾಗಿಲನ್ನು ಮೇಲೆತ್ತಿ ಎಂಟತ್ತು ಜನರ ಗುಂಪು 115 ಕೇಸ್ಗಳಷ್ಟು ಮಧ್ಯವನ್ನು ಹಾಗೂ 7 ಬಿಯರ್ ಬಾಟಲಿಗಳನ್ನು ಕದ್ದೊಯ್ದಿದ್ದಾರೆ. ಮದ್ಯ ಕದ್ದವರು ಮೊದಲಿಗೆ ದ್ವಿಚಕ್ರ ವಾಹನ ದಲ್ಲಿ ಬಂದಿದ್ದು, ನಂತರ ಬುಲೆರೋ ವಾಹನದಲ್ಲಿ ಬಂದಿದ್ದರೆಂಬುದು ಕಾವಲಿಗಿದ್ದ ನರಸಿಂಹರೆಡ್ಡಿ, ಗಂಗಾಧರರವರ ಹೇಳಿಕೆಯಾಗಿದೆ. ಅಂಗಡಿಯ ಮುಂಭಾಗ ನಿಲ್ಲಿಸಿದ್ದ ಟ್ರಾಕ್ಟರ್ನಲ್ಲಿ ಮಲಗಿದ್ದ ಗಂಗಾಧರ ಮತ್ತು ನರಸಿಂಹ ರೆಡಿಯ ್ಡ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ, ಕೂಗಾಡದಂತೆ ಚಾಕು ತೋರಿಸಿದರೆನ್ನಲಾಗಿದೆ. ಮದ್ಯದ ಅಂದಾಜು ಮೌಲ್ಯ 4,73,000 ರೂ.ಗಳೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಬಕಾರಿ ಉಪಾಧೀಕ್ಷಕ ಸುಭಾಷ್ ಚಂದ್ರ, ನಿರೀಕ್ಷಕರಾದ ಬಿ.ಲತಾ, ಪಿ.ಎಸ್.ಐ ನಂದೀಶ್ ವಿ, ನೌಕರ ಪ್ರಕಾಶ್ ಹಾಗೂ ಮಿಡಿಗೇಶಿ ಪಿ.ಎಸ್.ಐ ಹನುಮಂತರಾಯಪ್ಪ, ಸಿ.ಪಿ.ಐ ಸರ್ದಾರ್, ಡಿ.ವೈ.ಎಸ್.ಪಿ. ಪ್ರವೀಣ್, ಅಬಕಾರಿ ಪಿ.ಎಸ್.ಐ ನಾಗಲಿಂಗಾಚಾರ್, ಶ್ವಾನದಳ, (ಡಾಗ್ ಸ್ಕ್ವಾಡ್), ಬೆರಳಚ್ಚು ತಜ್ಞ ಮಂಜುನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಪ್ರಕರಣ ಕುರಿತು ಕೇಸು ದಾಖಲಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ