ತಿರುವನಂತಪುರಂ
ದೇಶದಲ್ಲಿ ರುದ್ರತಾಂಡವ ಆಡುತ್ತಿರುವ ಕೊರೋನಾವನ್ನು ಬಗ್ಗು ಬಡಿದ ನಂತರ ಮುಂದೆ ಎದುರಾಗುವ ಯಾವುದೇ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸಿದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೊರೋನಾ ರೋಗವನ್ನು ಹೋಗಾಲಾಡಿಸಲು ಕೇರಳ ರಾಜ್ಯ ಹೊಸ ಮಾರ್ಗ ಕಂಡು ಕೊಂಡಿದೆ. ಕೇರಳದಲ್ಲಿ ವರದಿಯಾಗುತ್ತಿರುವ ಹೆಚ್ಚಿನ ಪ್ರಕರಣಗಳು ರಾಜ್ಯದ ಹೊರಗಿನಿಂದ ಬಂದಿದ್ದವು ಎಂದು ಹೇಳಿದ್ದಾರೆ. ನಾವು ರೋಗಕ್ಕೆ ಹೆದರಿ ದೂರ ಓಡಬಾರದು, ಈ ಮಣ್ಣು ಅವರಿಗೂ ಸೇರಿದ್ದು ಎಂದು ಹೇಳಿದ್ದಾರೆ.
ಕೇರಳಕ್ಕೆ ವಿದೇಶದಿಂದ ಹಿಂದಿರುಗಿದವರ ಪ್ರಶ್ನೆಗಳಿಗೆ ಟ್ವಿಟ್ಟರ್ ನಲ್ಲಿ ಉತ್ತರಿಸಿದ ಅವರು, ಉದ್ಯೋಗದ ಸಮಸ್ಯೆ, ಮುಂಬರುವ ಮುಂಗಾರು ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
