ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಆರ್ಭಟಿಸಿದೆ. ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿದೆ. ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 266 ಜನರಿಗೆ ಸೋಂಕು ಖಚಿತವಾದ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5017ಕ್ಕೆ ಏರಿಕೆಯಾಗಿದೆ. ಜೊತೆಗೆ ತುಮಕೂರಿನ ಮೂವರು ಸೇರಿ ನಾಲ್ಕು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬುಧವಾರ 174 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 3626 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1240 ಸೋಂಕು ಸಕ್ರಿಯ ಪ್ರಕರಣಗಳಿವೆ.
ತುಮಕೂರಿನ ಎಸ್ಎಸ್ ಪುರಂನ 74 ವರ್ಷದ ಮಹಿಳೆ, ಎಸ್ಐಟಿ ಬಡಾವಣೆಯ 67 ವರ್ಷದ ಗಂಡಸು, ಮರಳೂರುದಿಣ್ಣೆಯ 36 ವರ್ಷದ ಗಂಡಸು ಹಾಗೂ ತುಮಕೂರು ತಾಲ್ಲೂಕು ಬೊಮ್ಮನಹಳ್ಳಿಯ 75 ವರ್ಷದ ಪುರುಷ ಸೋಂಕು ತಗುಲಿ ಅಸುನೀಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 151ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 98 ಜನ ಸೇರಿದ್ದಾರೆ.
ಗುರುವಾರ ವರದಿಯಾದ 266 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 110 ಜನರಿಗೆ ಸೋಂಕು ಖಚಿತವಾಗಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 32 ಜನರಿಗೆ, ತಿಪಟೂರು ತಾಲ್ಲೂಕಿನ 29, ಗುಬ್ಬಿ ತಾಲ್ಲೂಕಿನ 24 ಮಂದಿಗೆ ಪಾಸಿಟಿವ್ ಇರುವ ವರದಿ ಬಂದಿದೆ. ಪಾವಗಡ ತಾಲ್ಲೂಕಿನಲ್ಲಿ 16, ಶಿರಾ ತಾಲ್ಲೂಕಿನ 16, ಕೊರಟಗೆರೆ ತಾಲ್ಲೂಕಿನ 14, ತುರುವೇಕೆರೆ ತಾಲ್ಲೂಕಿನಲ್ಲಿ 11, ಮಧುಗಿರಿ ತಾಲ್ಲೂಕಿನ 9, ಕುಣಿಗಲ್ ತಾಲ್ಲೂಕಿನಲ್ಲಿ 5 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 151 ಪುರುಷರು, 115 ಮಹಿಳೆಯರು, 5 ಮಕ್ಕಳು, 60 ವರ್ಷ ಮೇಲ್ಪಟ್ಟ 38 ಜನರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 5017 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 1887, ಕುಣಿಗಲ್ ತಾ. 449, ಪಾವಗಡ ತಾ. 437, ತಿಪಟೂರು ತಾ. 404, ಮಧುಗಿರಿ ತಾ. 345, ಶಿರಾ ತಾ. 323, ಗುಬ್ಬಿ ತಾ. 315, ಚಿಕ್ಕನಾಯಕನಹಳ್ಳಿ ತಾ. 300, ತುರುವೇಕೆರೆ ತಾ. 292, ಕೊರಟಗೆರೆ ತಾ. 266 ಪ್ರಕರಣ ವರದಿಯಾಗಿವೆ.
ಈವರೆಗೂ ಕೊರೊನಾ ಸೋಂಕು ತಗುಲಿದ 5017 ಜನರಲ್ಲಿ 151 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 98, ಕುಣಿಗಲ್ ತಾಲ್ಲೂಕಿನಲ್ಲಿ 9, ಗುಬ್ಬಿ ತಾಲ್ಲೂಕಿನಲ್ಲಿ 8, ಪಾವಗಡ ತಾಲ್ಲೂಕಿನಲ್ಲಿ 7, ಶಿರಾ ತಾಲ್ಲೂಕಿನ 7, ತಿಪಟೂರು ತಾಲ್ಲೂಕಿನ 6, ಕೊರಟಗೆರೆ ತಾಲ್ಲೂಕಿನಲ್ಲಿ 5, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4, ತುರುವೇಕೆರೆ ತಾಲ್ಲೂಕು 4, ಮಧುಗಿರಿ ತಾಲ್ಲೂಕಿನಲ್ಲಿ 3 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 5017 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 3626 ಮಂದಿ ಗುಣಮುಖರಾಗಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
